ಬೆಂಗಳೂರಿನಲ್ಲಿ ಬಿರುಗಾಳಿ ಸಹಿತ ಆಲಿಕಲ್ಲು ಮಳೆ

Update: 2020-05-26 16:10 GMT

ಬೆಂಗಳೂರು, ಮೇ 26: ನಗರದ ಹಲವೆಡೆ ಮಂಗಳವಾರ ಸಂಜೆ ಗುಡುಗು, ಬಿರುಗಾಳಿ ಸಹಿತ ಆಲಿಕಲ್ಲು ಮಳೆಯಾಗಿದೆ. ಕೆಲವೆಡೆ ಮರಗಳು ಧರೆಗುರುಳಿವೆ.

ನಗರದ ಯಶವಂತಪುರ, ಶೇಷಾದ್ರಿಪುರಂ, ಯಲಹಂಕ, ಹೆಬ್ಬಾಳ, ಮತ್ತೀಕೆರೆ, ಜಕ್ಕೂರು, ಮೇಖ್ರಿ ಸರ್ಕಲ್, ಕಾರ್ಪೊರೇಷನ್ ಸರ್ಕಲ್, ಮೆಜೆಸ್ಟಿಕ್, ವಿಧಾನಸೌಧ, ಶಾಂತಿನಗರ, ಕಬ್ಬನ್ ಪಾರ್ಕ್, ಮೈಸೂರು ರಸ್ತೆ ಮತ್ತು ವಿಜಯನಗರ ಸೇರಿದಂತೆ ವಿವಿಧಡೆ ಗುಡುಗು, ಬಿರುಗಾಳಿ ಸಹಿತ ಆಲಿಕಲ್ಲು ಮಳೆಯಾಗಿದೆ.

ಮಳೆಯಿಂದ ಮೈಸೂರು ರಸ್ತೆ, ಬ್ಯಾಟರಾಯನಪುರ, ವಿಜಯನಗರ, ಕಾರ್ಪೊರೇಷನ್ ಸರ್ಕಲ್, ಕೆ.ಆರ್ ಸರ್ಕಲ್ ಮತ್ತು ಮೆಜೆಸ್ಟಿಕ್ ಸುತ್ತ ವಾಹನ ದಟ್ಟನೆ ಹೆಚ್ಚಾಗಿದ್ದರಿಂದ ವಾಹನ ಸವಾರರು ಪರದಾಡುವಂತಾಯಿತು. ಅಲ್ಲದೇ ಬಿಎಂಟಿಸಿ ಬಸ್ ಸಂಚಾರ ಏಳು ಘಂಟೆಗೆ ಮುಕ್ತಾಯವಾಗುವ ಹಿನ್ನೆಲೆ ಪ್ರಯಾಣಿಕರು ಮಳೆಯಲ್ಲಿಯೇ ತಮ್ಮ ತಮ್ಮ ಬಸ್ ಹತ್ತಲು ಹರಸಾಹಸಪಟ್ಟರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News