ದರೋಡೆ ಸಂಚು ಆರೋಪ: ಸಿಸಿಬಿ ಪೊಲೀಸರಿಂದ ನಾಲ್ವರ ಸೆರೆ

Update: 2020-05-27 12:58 GMT

ಬೆಂಗಳೂರು, ಮೇ 27: ಬ್ಯಾಡರಹಳ್ಳಿಯ ಭರತ್ ನಗರದ ಉದ್ಯಾನವೊಂದರ ಬಳಿ ದರೋಡೆಗೆ ಸಂಚು ಹಾಕಿದ್ದ ಆರೋಪದಡಿ ನಾಲ್ವರನ್ನು ಸಿಸಿಬಿ ಪೊಲೀಸರು ಬಂಧಿಸಿ ವಿಚಾರಣೆಗೊಳಪಡಿಸಿದ್ದಾರೆ.

ರಾಜಗೋಪಾಲನಗರದ ಅಮರ್ ನಾಥ್(31), ಶಿವರಾಜ್(32), ಕೆಪಿ ಅಗ್ರಹಾರದ ಶಾಂತರಾಜು(27), ಶ್ರೀನಿವಾಸ್(30) ಬಂಧಿತ ಆರೋಪಿಗಳೆಂದು ಪೊಲೀಸರು ತಿಳಿಸಿದ್ದಾರೆ.

ಆರೋಪಿಗಳ ಪೈಕಿ ಅಮರ್ ನಾಥ್ ಸಂಜಯ್ ನಗರ ಹಾಗೂ ಕೊಡುಗೇಹಳ್ಳಿ ವ್ಯಾಪ್ತಿಯ ಕಳವು ಪ್ರಕರಣಗಳಲ್ಲಿ ಭಾಗಿಯಾಗಿದ್ದಾನೆ. ಮತ್ತೊಬ್ಬ ಆರೋಪಿ ಶಿವರಾಜ್ ತಾವರೆಕೆರೆಯಲ್ಲಿ ಕೊಲೆ, ಕೊಡುಗೇಹಳ್ಳಿಯಲ್ಲಿ ಕಳ್ಳತನ, ರಾಜಗೋಪಾಲ ನಗರದಲ್ಲಿ ದರೋಡೆ ಯತ್ನ ಪ್ರಕರಣಗಳಲ್ಲಿ ಭಾಗಿಯಾಗಿದ್ದು, ಈ ಇಬ್ಬರ ಮೇಲೆ ನ್ಯಾಯಾಲಯಗಳು ಹಲವು ಬಾರಿ ವಾರೆಂಟ್ ಹೊರಡಿಸಿದ್ದರೂ ನ್ಯಾಯಾಲಯಕ್ಕೆ ಹಾಜರಾಗದೆ ತಲೆಮರೆಸಿಕೊಂಡಿದ್ದರು. ಖಚಿತ ಮಾಹಿತಿಯಾಧರಿಸಿ ಆರೋಪಿಗಳನ್ನು ಬಂಧಿಸಿ ಹೆಚ್ಚಿನ ತನಿಖೆ ಕೈಗೊಳ್ಳಲಾಗಿದೆ ಎಂದು ಜಂಟಿ ಪೊಲೀಸ್ ಆಯುಕ್ತ ಸಂದೀಪ್ ಪಾಟೀಲ್ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News