'ಬಿಎಸ್ವೈ ವಿರುದ್ಧ ಅಸಮಾಧಾನ' ಸುದ್ದಿ ಬಗ್ಗೆ ಸಚಿವ ವಿ. ಸೋಮಣ್ಣ ಸ್ಪಷ್ಟನೆ
Update: 2020-05-30 15:37 GMT
ಬೆಂಗಳೂರು, ಮೇ 30: ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಒಂದು ಸಮುದಾಯದ ನಾಯಕರಲ್ಲ. ಅವರು ಎಲ್ಲಾ ಸಮುದಾಯಗಳ ನಾಯಕರು ಎಂದು ಸಚಿವ ವಿ. ಸೋಮಣ್ಣ ಹೇಳಿದ್ದಾರೆ.
ರಾಜ್ಯ ಬಿಜೆಪಿಯಲ್ಲಿ ಬಿಎಸ್ವೈ ವಿರುದ್ಧ ಅಸಮಾಧಾನವಿದೆ ಎಂಬ ಮಾತುಗಳು ಕೇಳಿ ಬರುತ್ತಿರುವ ಹಿನ್ನಲೆಯಲ್ಲಿ ಸೋಮಣ್ಣ ಈ ಮಾತುಗಳನ್ನಾಡಿದ್ದಾರೆ. ಯಡಿಯೂರಪ್ಪ ವಿರುದ್ಧ ಪಕ್ಷದಲ್ಲಿ ಯಾವುದೇ ಅಸಮಾಧಾನ ಇಲ್ಲ. ಯಡಿಯೂರಪ್ಪ ಕೋವಿಡ್ ನಿಯಂತ್ರಣ ಉತ್ತಮವಾಗಿ ಮಾಡುತ್ತಿದ್ದಾರೆ. ಯಡಿಯೂರಪ್ಪ ರಾಜ್ಯದ ಜಾತ್ಯತೀತ ನಾಯಕ ಎಂದು ಹೇಳಿದರು.
ಪಕ್ಷದಲ್ಲಿ ಕೆಲವರಿಗೆ ಅಸಮಾಧಾನ ಇದ್ದರೆ ಅಪಾರ ಅನುಭವ ಇರುವ ಯಡಿಯೂರಪ್ಪ ಅದನ್ನೆಲ್ಲಾ ಸರಿಪಡಿಸುತ್ತಾರೆ. ನಾವೆಲ್ಲ ಯಡಿಯೂರಪ್ಪ ಜೊತೆ ಇದ್ದೇವೆ ಎಂದು ಸೋಮಣ್ಣ ತಿಳಿಸಿದರು.