ಬಿಐಇಆರ್‌ಟಿ ಪ್ರೌಢ ಹುದ್ದೆ: ಅರ್ಜಿ ಆಹ್ವಾನ

Update: 2020-06-04 18:26 GMT

ಮಂಗಳೂರು, ಜೂ.4: ಪ್ರಸಕ್ತ 2020-21ನೇ ಸಾಲಿನ ಸಮನ್ವಯ ಶಿಕ್ಷಣದ ಕಾರ್ಯತಂತ್ರದಡಿ ದ.ಕ. ಜಿಲ್ಲೆಯಲ್ಲಿ ಖಾಲಿ ಇರುವ ಬಿಐಇಆರ್‌ಟಿ ಪ್ರೌಢ ಹುದ್ದೆಗೆ ಅರ್ಜಿ ಆಹ್ವಾನಿಸಿದೆ.

ಬಂಟ್ವಾಳ, ಪುತ್ತೂರು ಮತ್ತು ಸುಳ್ಯ ತಲಾ ಎರಡು, ಬೆಳ್ತಂಗಡಿ, ಮೂಡುಬಿದಿರೆ ತಲಾ ಒಂದರಂತೆ ವಿಶೇಷ ಬಿ.ಇಡಿ ಮತ್ತು ಎಂಸಿಟಿಟಿ (Multi Category Teachers Training) ವಿದ್ಯಾರ್ಹತೆ ಪ್ರಮಾಣಪತ್ರ ಹೊಂದಿರುವ ಅರ್ಹ ವಿಶೇಷ ಶಿಕ್ಷಕರನ್ನು ನೇರ ಗುತ್ತಿಗೆ ಮೂಲಕ ನೇಮಕ ಪ್ರಕ್ರಿಯೆ ನಡೆಯಲಿದೆ.

ಆಸಕ್ತರು ಅಗತ್ಯ ದಾಖಲೆಯೊಂದಿಗೆ (ಆರ್‌ಸಿಐ) ಸಮಗ್ರ ಶಿಕ್ಷಣ ಕರ್ನಾಟಕ, ದ.ಕ. ಜಿಪಂ ಕಟ್ಟಡ, ಕೊಟ್ಟಾರ, ಮಂಗಳೂರು, ಜಿಲ್ಲಾ ಕಚೇರಿಗೆ ಜೂ.10ರಂದು ಮಧ್ಯಾಹ್ನ 1:30 ರೊಳಗೆ ಅರ್ಜಿ ಸಲ್ಲಿಸಬಹುದು. ಹೆಚ್ಚಿನ ಮಾಹಿತಿಗಾಗಿ ದೂ.ಸಂ.: 0824-2452100ನ್ನು ಪ್ರಕಟನೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News