ನಾರಾಯಣ ಕುಂದರ್
Update: 2020-06-08 17:01 GMT
ಬ್ರಹ್ಮಾವರ, ಜೂ.8: ಬಾರ್ಕೂರು ಕಚ್ಚೂರು ನಿವಾಸಿ ನಾರಾಯಣ ಕುಂದರ್(79) ಎಂಬವರು ಅಲ್ಪಕಾಲದ ಅಸೌಖ್ಯದಿಂದ ಜೂ.6ರಂದು ಸ್ವಗೃಹ ದಲ್ಲಿ ನಿಧನರಾದರು.
ಬೆಂಗಳೂರಿನ ಶಾಸಕರ ಭವನದ ಹೋಟೆಲ್ನಲ್ಲಿ ರಾಜಕೀಯ ನಾಯಕರ ಕೊಠಡಿಗೆ ಮೇಲ್ವಿಚಾರಕರಾಗಿ ಸೇವೆ ಸಲ್ಲಿಸುತ್ತಿದ್ದ ಇವರು, ಇದೀಗ ವಿಶ್ರಾಂತಿ ಜೀವನ ನಡೆಸುತ್ತಿದ್ದರು. ಮೃತರು ಪತ್ನಿ, ಓರ್ವ ಪುತ್ರ ಹಾಗೂ ಅಪಾರ ಬಂಧು ಮಿತ್ರರನ್ನು ಅಗಲಿದ್ದಾರೆ. ಮೃತರಿಗೆ ಮಾಜಿ ಸಚಿವ ಪ್ರಮೋದ್ ಮಧ್ವರಾಜ್, ಮಾಜಿ ಶಾಸಕ ಯು.ಆರ್.ಸಭಾಪತಿ ಸಂತಾಪ ಸೂಚಿಸಿದ್ದಾರೆ.