ಕೊಳವೆ ಮಾರ್ಗ ಕಾಮಗಾರಿ: ಜೂನ್ 11 ರಂದು ನೀರು ವ್ಯತ್ಯಯ

Update: 2020-06-09 17:18 GMT

ಬೆಂಗಳೂರು, ಜೂ.9: ಬೆಂಗಳೂರು ಜಲಮಂಡಳಿಯು ಬನ್ನೇರುಘಟ್ಟ ರಸ್ತೆಯ ಕಾವೇರಿ ನೀರು ಸರಬರಾಜು ಯೋಜನೆಯ ಗೊಟ್ಟಿಗೆರೆ ಸ್ಟೇಷನ್ ಬಳಿ ಕೊಳವೆ ಮಾರ್ಗವನ್ನು ಅಳವಡಿಸುವ ಬೈಪಾಸ್ ಕಾಮಗಾರಿಯು ಜೂನ್ 11 ರಂದು ಬೆಳಿಗ್ಗೆ 6 ಗಂಟೆಯಿಂದ ಸಂಜೆ 6 ರವರೆಗೆ ನಡೆಯಲಿದೆ.

ಈ ಹಿನ್ನಲೆಯಲ್ಲಿ ನಗರದ ಪೂರ್ವ ಮತ್ತು ದಕ್ಷಿಣ ವಲಯದ ವಿಜಯ ಬ್ಯಾಂಕ್ ಲೇಔಟ್, ಆರ್.ಬಿ.ಐ. ಲೇಔಟ್, ಕೋಣನಕುಂಟೆ, ಜೆ.ಪಿ.ನಗರದ 4,5,6,7 ಮತ್ತು 8ನೇ ಹಂತ, ಪುಟ್ಟೇನಹಳ್ಳಿ, ಜರಗನಹಳ್ಳಿ, ಚುಂಚಘಟ್ಟ ಮುಖ್ಯ ರಸ್ತೆ, ಬಿಳೇಕಹಳ್ಳಿ, ಅರಕೆರೆ, ಅರಕೆರೆ ಮೈಕೋಲೇಔಟ್, ಡಾಲರ್ಸ್ ಕಾಲನಿ, ಕೋಡಿಚಿಕ್ಕನಹಳ್ಳಿ, ಎಚ್‍ಎಸ್‍ಆರ್ ಲೇಔಟ್, ಬೊಮ್ಮನಹಳ್ಳಿ, ಮಂಗಮ್ಮನಪಾಳ್ಯ,  ಸೋಮಸುಂದರ ಪಾಳ್ಯ, ಪರಂಗಿ ಪಾಳ್ಯ, ಅಗರ, ಬಂಡೆಪಾಳ್ಯ, ಕೋರಮಂಗಲ, ಬೆಳ್ಳಂದೂರು, ವೆಂಕಟಾಪುರ, ಜಕ್ಕಸಂದ್ರ, ಟೀಚರ್ಸ್ ಕಾಲನಿ, ಬಿಟಿಎಂ ಲೇಔಟ್ 1 ಮತ್ತು 2ನೇ ಹಂತ, ಮಡಿವಾಳ, ವೆಂಕಟೇಶ್ವರ ಲೇಔಟ್, ಗುರಪ್ಪನಪಾಳ್ಯ, ಬಿಸ್ಮಿಲ್ಲಾ ನಗರ, ಸುದ್ದಗುಂಟೆಪಾಳ್ಯ, ಜಯನಗರ 4 ನೇ `ಟಿ' ಬ್ಲಾಕ್, ಬಿಎಚ್‍ಇಎಲ್ ಲೇಔಟ್, ಕೃಷ್ಣಪ್ಪ ಗಾರ್ಡನ್, ಎನ್.ಎ.ಎಲ್. ಲೇಔಟ್, ಅರಸು ಕಾಲನಿ ಮತ್ತು ಸುತ್ತ-ಮುತ್ತಲಿನ ಪ್ರದೇಶಗಳಲ್ಲಿ ನೀರು ಪೂರೈಕೆಯಲ್ಲಿ ವ್ಯತ್ಯಯವಾಗಲಿದೆ ಎಂದು ಪ್ರಕಟನೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News