ಯು. ಸುಬ್ರಹ್ಮಣ್ಯ ರಾವ್

Update: 2020-06-10 12:44 GMT

ಉಡುಪಿ, ಜೂ.10: ಕುಕ್ಕಿಕಟ್ಟೆಯ ಚಿಟ್ಪಾಡಿ ನಿವಾಸಿ ಖ್ಯಾತ ಕಲಾವಿದ ಶ್ರೀಗಣೇಶ ಆರ್ಟ್ಸ್‌ನ ಮಾಲಕ ಯು.ಸುಬ್ರಹ್ಮಣ್ಯ ರಾವ್(70) ಮಂಗಳವಾರ ಹೃದಯಾಘಾತದಿಂದ ನಿಧನರಾದರು. ಇವರು ಪತ್ನಿ, ಇಬ್ಬರು ಪುತ್ರರು ಹಾಗೂ ಇಬ್ಬರು ಪುತ್ರಿಯರನ್ನು ಅಗಲಿದ್ದಾರೆ.

ಕಳೆದ ಐವತ್ತು ವರ್ಷಗಳಿಂದ ಉಡುಪಿ ಸಾರ್ವಜನಿಕ ಗಣೇಶೋತ್ಸವ ಸಮಿತಿ ಕಡಿಯಾಳಿ ಸೇರಿದಂತೆ ನೂರಾರು ಸಂಘ-ಸಂಸ್ಥೆಗಳಿಗೆ, ಮನೆಗಳಿಗೆ ಗಣಪತಿಯ ವಿಗ್ರಹ, ಶಾರದೆ ವಿಗ್ರಹ ರಚನೆ ಮಾಡಿಕೊಡುತ್ತಿದ್ದರು. ಉಡುಪಿ ಜಿಲ್ಲೆಯಲ್ಲಿ ಅತ್ಯಂತ ಎತ್ತರದ ಕಡಿಯಾಳಿ ಗಣಪತಿಯನ್ನೂ ಇವರು ಮಾಡಿದ್ದರು. ರಚನೆ ಇವರು ಸ್ವತಹ ಮಾಡುತ್ತಿದ್ದರು. ರಾವ್ ರಾಷ್ಟ್ರೀಯ ಸ್ವಯಂಸೇವಕ ಸಂಘದ ಸದಸ್ಯರಾಗಿ, ಭಾರತೀಯ ಜನತಾ ಪಾರ್ಟಿಯ ಹಿರಿಯ ಕಾರ್ಯಕರ್ತರಾಗಿ ಸೇವೆ ಸಲ್ಲಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News

ವಸಂತಿ