ಬೆಂಗಳೂರು: ವಂಚನೆ ಆರೋಪ; ಮಹಿಳೆ ಸೇರಿ ಇಬ್ಬರ ವಿರುದ್ಧ ಎಫ್‍ಐಆರ್

Update: 2020-06-13 16:36 GMT

ಬೆಂಗಳೂರು, ಜೂ.13: ಉದ್ಯಮಿಗಳಿಂದ ದುಬಾರಿ ಬೆಲೆಯ ಕಾರುಗಳನ್ನು ಖರೀದಿ ನೆಪದಲ್ಲಿ ವಂಚನೆ ಮಾಡುತ್ತಿದ್ದ ಆರೋಪದಡಿ ಮಹಿಳೆ ಸೇರಿ ಇಬ್ಬರ ವಿರುದ್ಧ ಇಲ್ಲಿನ ಕಬ್ಬನ್ ಪಾರ್ಕ್ ಪೊಲೀಸ್ ಠಾಣೆಯಲ್ಲಿ ಎಫ್‍ಐಆರ್ ದಾಖಲಾಗಿದೆ.

ಕೇರಳ ಮೂಲದ ಅಮ್ಜದ್ ಮತ್ತು ಖುಷಿ ವಿರುದ್ಧ ಕಬ್ಬನ್ ಪಾರ್ಕ್ ಪೊಲಿಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ ಎಂದು ತಿಳಿದುಬಂದಿದೆ.

ಆರೋಪಿ ಅಮ್ಜದ್, ಬೆಂಗಳೂರಿನ ಉದ್ಯಮಿ ಶಾಜೀ ಜಾರ್ಜ್ ಥಾಮಸ್ ಎಂಬವರ ಬಳಿ ದುಬಾರಿ ಬೆಲೆಯ ಕಾರು ಖರೀದಿಗೆ ಮುಂದಾಗಿದ್ದಾರೆ. ಬಳಿಕ 48 ಲಕ್ಷ ರೂ. ಗೆ ಕಾರು ಖರೀದಿಯ ಮಾತುಕತೆ ನಡೆಸಿ ಕಾರು ತೆಗೆದುಕೊಂಡು ಹೋಗಿದ್ದಾರೆ. ಆದರೆ, ಕಾರು ಕೊಂಡ್ಯೂಯ್ದು ಎರಡು ತಿಂಗಳಾದರೂ ಹಣ ನೀಡದೇ ಥಾಮಸ್‍ಗೆ ಆರೋಪಿಗಳು ಜೀವ ಬೆದರಿಕೆ ಹಾಕಿದ್ದಾರೆ ಎಂದು ಆರೋಪಿಸಲಾಗಿದೆ.

ಆರೋಪಿಗಳು ಕೇರಳ ಸೇರಿದಂತೆ ರಾಜ್ಯದಲ್ಲಿ ಹಲವೆಡೆ ವಂಚನೆ ಎಸಗಿರವುದು ಕಂಡು ಬಂದಿದ್ದು, ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಕೈಗೊಂಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News