​ಶ್ರೀ ಬಾಲಗಂಗಾಧರ ಸ್ವಾಮೀಜಿ

Update: 2020-06-20 18:09 GMT

ಕೊಣಾಜೆ, ಜೂ.20: ಕಂಬಳಪದವಿನ ಶ್ರೀದುರ್ಗಾಕಾಳಿ ದೇವಸ್ಥಾನ ಹಾಗೂ ಮುಂಬೈ ಅಂಬರ್ ನಾಥ್ ದುರ್ಗಾಕಾಳಿ ದೇವಸ್ಥಾನದ ಸ್ವಾಮೀಜಿಯಾಗಿದ್ದ ಶ್ರೀ ಬಾಲಗಂಗಾಧರ ಸ್ವಾಮೀಜಿ(73) ಶನಿವಾರ ಅಲ್ಪಕಾಲದ ಅಸೌಖ್ಯದಿಂದ ನಿಧನರಾದರು.

ಶ್ರೀ ಬಾಲಗಂಗಾಧರ ಸ್ವಾಮೀಜಿಯವರು ರಾಮಣ್ಣ ಚೌಟ ಹಾಗೂ ಭಾಗೀರಥಿ ಚೌಟ ಅವರ ಪುತ್ರನಾಗಿ ಪಜೀರು ಗ್ರಾಮದ ಪೆರ್ನಮುಗುಳಿ ದೊಡ್ಡ ಮನೆಯಲ್ಲಿ ಜನಿಸಿದ್ದರು. ಮುಂಬೈಗೆ ತೆರಳಿದ್ದ ಅವರು ಅಂಬರ್‌ನಾಥ್‌ನಲ್ಲಿ ಶ್ರೀದುರ್ಗಾಕಾಳಿ ದೇವಸ್ಥಾನವನ್ನು ಸ್ಥಾಪಿಸಿ ದೇವಳದ ಸ್ವಾಮೀಜಿಯಾಗಿದ್ದರು. ಬಳಿಕ ಕಂಬಳ ಪದವಿನಲ್ಲಿಯೂ ಶ್ರೀ ದುರ್ಗಾಕಾಳಿ ದೇವಸ್ಥಾನದ ನಿರ್ಮಾಣದೊಂದಿಗೆ ಧಾರ್ಮಿಕ ಹಾಗೂ ಸಾಮಾಜಿಕವಾಗಿ ಸೇವೆ ಸಲ್ಲಿಸಿದ್ದಾರೆ.

ಕಂಬಳಪದವು ದೇವಸ್ಥಾನಕ್ಕೂ ಪ್ರತೀ ವಾರ್ಷಿಕ ಜಾತ್ರೆಯ ಸಂದರ್ಭದಲ್ಲಿ ಆಗಮಿಸುತ್ತಿದ್ದರು. ಈ ಬಾರಿ ಕೊರೋನ ಕಾರಣದಿಂದ ಕಂಬಳ ಪದವಿನ ದೇವಸ್ಥಾನಕ್ಕೆ ಬಂದಿರಲಿಲ್ಲ . ಮೃತರು ಪತ್ನಿ, ಓರ್ವ ಪುತ್ರಿ ಹಾಗೂ ಪುತ್ರನನ್ನು ಅಗಲಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News

ವಸಂತಿ