ಅಗ್ನಿಶಾಮಕ ಇಲಾಖೆಯಲ್ಲಿ 1567 ಹುದ್ದೆಗೆ ಅರ್ಜಿ ಆಹ್ವಾನ

Update: 2020-06-21 15:58 GMT

ಮಂಗಳೂರು, ಜೂ.21: ರಾಜ್ಯ ಅಗ್ನಿಶಾಮಕ ಮತ್ತು ತುರ್ತು ಸೇವೆಗಳ ಇಲಾಖೆಯಲ್ಲಿನ 1567 ಹುದ್ದೆಗೆ ಆಸಕ್ತರಿಂದ ಅರ್ಜಿ ಆಹ್ವಾನಿಸಲಾಗಿದೆ.
ಅಗ್ನಿಶಾಮಕ ಠಾಣಾಧಿಕಾರಿಗಳು-36, ಅಗ್ನಿಶಾಮಕ ಚಾಲಕರು-227, ಚಾಲಕ ತಂತ್ರಜ್ಞರು-82 ಹಾಗೂ ಅಗ್ನಿಶಾಮಕರು-1222 ಹುದ್ದೆಗಳಿಗೆ ನೇಮಕಾತಿ ಪ್ರಕ್ರಿಯೆ ನಡೆಯಲಿದೆ. ಅರ್ಹರು www.ksp.gov.inಗೆ ಲಾಗಿನ್ ಆಗಿ ಅರ್ಜಿ ಸಲ್ಲಿಸಬಹುದು. ಅರ್ಜಿ ಸಲ್ಲಿಕೆ ಪ್ರಕ್ರಿಯೆಯು ಜೂ.22ರಿಂದ ಆರಂಭವಾಗಲಿದೆ. ಅರ್ಜಿ ಸಲ್ಲಿಕೆಗೆ ಜು.20 ಕೊನೆಯ ದಿನವಾಗಿದೆ.

ಅಗ್ನಿಶಾಮಕ ಮತ್ತು ತುರ್ತು ಸೇವಾ ಇಲಾಖೆಗೆ ಸೇರಲು ಇದೊಂದು ಉತ್ತಮ ಅವಕಾಶವಾಗಿದ್ದು, ಅಮೂಲ್ಯ ಮಾನವ ಜೀವಗಳನ್ನು ರಕ್ಷಿಸುವಲ್ಲಿ ಪಾತ್ರ ವಹಿಸಬಹುದು. ಹುದ್ದೆಗಳಿಗೆ ಜಿಲ್ಲೆಯ ಆಸಕ್ತರು ಅರ್ಜಿ ಸಲ್ಲಿಸಲು ಅಗ್ನಿಶಾಮಕ ಇಲಾಖೆಯ ಪ್ರಕಟನೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News