ಭಾಸ್ಕರ್ ಭಟ್
Update: 2020-06-23 12:44 GMT
ಉಡುಪಿ, ಜೂ.23: ಉದ್ಯಮಿ ಭಾಸ್ಕರ್ ಭಟ್ (71) ಸೋಮವಾರ ಕೊಡವೂರಿನ ಸ್ವಗೃಹದಲ್ಲಿ ನಿಧನ ಹೊಂದಿದರು. ಮಲ್ಪೆ ವಡಭಾಂಡೇಶ್ವರದ ಪ್ರಸಿದ್ಧ ಶ್ರೀಬಲರಾಮ ದೇವಸ್ಥಾನದ ಆಡಳಿತ ಮೊಕ್ತೇಸರರಾಗಿ ಕಳೆದ 12 ವರ್ಷಗಳಿಂದ ದೇವಸ್ಥಾನದ ಅಭಿವೃದ್ಧಿಗೆ ಶ್ರಮಿಸಿದ್ದ ಇವರು ಉತ್ತರ ಕರ್ನಾಟಕದ ಬ್ಯಾಡಗಿಯಲ್ಲಿ ಉದ್ಯಮಿಯಾಗಿಯೂ ಪ್ರಸಿದ್ಧರಾಗಿದ್ದರು.
ಇವರು ಪತ್ನಿ, ಓರ್ವ ಪುತ್ರ ಹಾಗೂ ಅಪಾರ ಬಂಧು ವರ್ಗವನ್ನು ಅಗಲಿದ್ದಾರೆ.