ಸುಶೀಲಾ ಆಳ್ವ

Update: 2020-06-24 16:31 GMT

ಬಂಟ್ವಾಳ, ಜೂ. 24: ತಾಲೂಕಿನ ಅನಂತಾಡಿ ನಿವಾಸಿ ಸುಶೀಲಾ ಆಳ್ವ ಅನಂತಾಡಿ (85) ಅವರು ಇಂದು ಮುಂಜಾನೆ ಸ್ವ ಗೃಹದಲ್ಲಿ ನಿಧನರಾದರು.‌ 

ಸಮಾಜ ಸೇವಕಿಯಾಗಿ ಗುರುತಿಸಿಕೊಂಡಿದ್ದ ಸುಶೀಲಾ ಆಳ್ವ ವಿಮಾ ಪ್ರತಿನಿಧಿಯಾಗಿ ಕೆಲಸ ನಿರ್ವಹಿಸುತ್ತಿದ್ದರು. ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದ ಮೃತರು ತುಂಬೆ ಬಿ.ಎ. ಕಾಲೇಜಿನ ಪ್ರಾಂಶುಪಾಲ ಗಂಗಾಧರ ಆಳ್ವ ಸಹಿತ ಇಬ್ಬರು ಪುತ್ರರು, ಓರ್ವ ಪುತ್ರಿ ಸಹಿತ ಅಪಾರ ಬಂದು ಬಳಗವನ್ನು ಅಗಲಿದ್ದಾರೆ.

ಮಾಜಿ ಸಚಿವ ಬಿ.ರಮಾನಾಥ ರೈ, ಜಿಲ್ಲಾ ಪಂಚಾಯತ್ ಸದಸ್ಯ ಚಂದ್ರಪ್ರಕಾಶ್ ಶೆಟ್ಟಿ ಸಹಿತ ಹಲವರು ಮೃತರ ಅಂತಿಮ‌ ದರ್ಶನ ಪಡೆದು ಸಂತಾಪ‌ ಸೂಚಿಸಿದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News

ವಸಂತಿ