ಕೊರೋನ ಸೋಂಕು ದೃಢ: ಆಸ್ಪತ್ರೆಗೆ ದಾಖಲಾಗಲು ಆ್ಯಂಬುಲೆನ್ಸ್ ಗಾಗಿ ಪರದಾಡಿದ ಎಎಸ್ಸೈ

Update: 2020-07-08 18:28 GMT

ಬೆಂಗಳೂರು, ಜು.8: ಕೊರೋನ ಸೋಂಕು ಸಂಬಂಧ ಆಸ್ಪತ್ರೆಗೆ ದಾಖಲಾಗಲು ಎಎಸ್ಸೈ ಒಬ್ಬರು ಆ್ಯಂಬುಲೆನ್ಸ್ ಗಾಗಿ ಪರದಾಡಿದ ಆರೋಪ ಕೇಳಿಬಂದಿದೆ.

ಕಾಮಾಕ್ಷಿಪಾಳ್ಯ ಠಾಣೆ ಇನ್‍ಸ್ಪೆಕ್ಟರ್ ಅವರ ಸಂಪರ್ಕದಲ್ಲಿದ್ದ ಎಎಸ್ಸೈ ಅವರಿಗೆ ಕೊರೋನ ದೃಢಪಟ್ಟಿದೆ. ಆದರೆ, ಚಿಕಿತ್ಸೆಗಾಗಿ ಆಸ್ಪತ್ರೆಗೆ ತೆರಳಲು ಆ್ಯಂಬುಲೆನ್ಸ್ ಇಲ್ಲದೆ, ಸಾಕಷ್ಟು ಸಮಯ ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ ಎನ್ನಲಾಗಿದೆ.

ಸದ್ಯ ಠಾಣೆಯನ್ನು ಸೀಲ್‍ಡೌನ್ ಮಾಡಲಾಗಿದೆ. ಸಂಪರ್ಕದಲ್ಲಿದ್ದ ಎಲ್ಲರನ್ನು ಕ್ವಾರಂಟೈನ್ ಪ್ರಕ್ರಿಯೆಗೆ ಒಳಪಡಿಸಲಾಗಿದೆ.

ಸೋಂಕು: ಬಂಧಿಸಿದ ಆರೋಪಿಗೆ ಕೊರೋನ ಸೋಂಕು ಅಂಟಿದ್ದು, ಆತನ ಪ್ರಾಥಮಿಕ ಸಂಪರ್ಕದಲ್ಲಿದ್ದ ಬನಶಂಕರಿ ಪೊಲೀಸ್ ಠಾಣೆಯ 20ಕ್ಕೂ ಹೆಚ್ಚು ಸಿಬ್ಬಂದಿಯನ್ನು ಕ್ವಾರಂಟೈನ್ ಮಾಡಲಾಗಿದೆ ಎಂದು ವರದಿಯಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News