ಬೆಂಗಳೂರು ಕನಿಷ್ಠ 15 ದಿನ ಬಿಗಿ ಲಾಕ್‍ಡೌನ್ ಆಗಲಿ: ಈಶ್ವರ್ ಖಂಡ್ರೆ

Update: 2020-07-17 11:22 GMT

ಬೆಂಗಳೂರು, ಜು.17: ಬೆಂಗಳೂರಿನಲ್ಲಿ ದಿನಕಳೆದಂತೆ ಏರಿಕೆ ಆಗುತ್ತಲೇ ಇರುವ ಕೋವಿಡ್-19ನ್ನು ನಿಯಂತ್ರಿಸಲು ಕನಿಷ್ಠ 15 ದಿನವಾದರೂ ಬಿಗಿ ಲಾಕ್‍ಡೌನ್ ಜಾರಿಯಾಗಬೇಕೆಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ್ ಖಂಡ್ರೆ ಸರಕಾರವನ್ನು ಒತ್ತಾಯಿಸಿದ್ದಾರೆ.

ಈ ಕುರಿತು ಟ್ವೀಟ್ ಮಾಡಿರುವ ಅವರು, ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಬೆಂಗಳೂರಿಗೆ ಲಾಕ್‍ಡೌನ್ ಘೋಷಿಸಿದ್ದಾರೆ. ಆದರೆ, ನೆಪಮಾತ್ರದ ಲಾಕ್‍ಡೌನ್‍ನಿಂದ ನಿರೀಕ್ಷೆ ಫಲಿತಾಂಶ ಪಡೆಯುವುದು ಕಷ್ಟ. ಹೀಗಾಗಿ ತಜ್ಞರ ಅಭಿಪ್ರಾಯ ಪಡೆದು ಕನಿಷ್ಠ 15 ದಿನವಾದರು ಬಿಗಿ ಲಾಕ್‍ಡೌನ್ ಆಗಲಿ. ಇಲ್ಲದಿದ್ದರೆ, ಆ ಭಗವಂತ ಬಂದರೂ ಬೆಂಗಳೂರನ್ನು ಕಾಪಾಡುವುದು ಕಷ್ಟವಾಗಲಿದೆ ಎಂದು ಅಭಿಪ್ರಾಯಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News