ಕೊರೋನದಿಂದ ಮೃತಪಟ್ಟ ಬಿಬಿಎಂಪಿ ನೌಕರನ ಕುಟುಂಬಕ್ಕೆ ಝಮೀರ್ ಅಹ್ಮದ್ ಸಾಂತ್ವನ

Update: 2020-07-18 13:45 GMT

ಬೆಂಗಳೂರು, ಜು.18: ಕೊರೋನ ಸೋಂಕಿನಿಂದ ಇತ್ತೀಚಿಗೆ ನಿಧನರಾದ ಚಾಮರಾಜಪೇಟೆ ವಿಧಾನಸಭಾ ಕ್ಷೇತ್ರದ ರಾಯಪುರಂ ವಾರ್ಡ್ ನ ಬಿಬಿಎಂಪಿ ನೌಕರ ನರಸಿಂಹಮೂರ್ತಿ ಅವರ ನಿವಾಸಕ್ಕೆ ಶನಿವಾರ ಭೇಟಿ ನೀಡಿದ ಶಾಸಕ ಬಿ.ಝೆಡ್.ಝಮೀರ್ ಅಹ್ಮದ್ ಖಾನ್, ಅವರ ಕುಟುಂಬ ಸದಸ್ಯರಿಗೆ ಸಾಂತ್ವಾನ ಹೇಳಿದರು. ನರಸಿಂಹಮೂರ್ತಿ ಅವರ ಅಂತ್ಯಕ್ರಿಯೆಯನ್ನು ಝಮೀರ್ ಅಹ್ಮದ್ ಅವರ ತಂಡದ ಸದಸ್ಯರು ನೆರವೇರಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News