×
Ad

ರಾಜು ಶ್ರೀಯಾನ್ ನಾವುಂದ

Update: 2020-07-23 18:18 IST

ಮುಂಬೈ, ಜು.23: ಮುಂಬೈ ನಗರದ ಪ್ರಸಿದ್ಧ ನಾಟ್ಯಾಲಯ ಅರುಣೋದಯ ಕಲಾ ನಿಕೇತನದ ನಿರ್ದೇಶಕ, ಕೋಟಕ್ ಮಹೀಂದ್ರ ಬ್ಯಾಂಕ್‍ನ ಮಾಜಿ ಉದ್ಯೋಗಿ, ಮುಂಬಯಿ ತುಳುಕನ್ನಡಿಗರ ಅನಘ್ರ್ಯ ರತ್ನ ಎಂದೇ ಚಿರಪರಿಚಿತ ರಾಜು ಶ್ರೀಯಾನ್ ನಾವುಂದ (51.) ಸಯಾನ್ ಚುನಾಭಟ್ಟಿ ಇಲ್ಲಿನ ತಿರುಪತಿ ಹೈಟ್ಸ್ ನಿವಾಸದಲ್ಲಿ ಇಂದಿಲ್ಲಿ ಗುರುವಾರ ಬೆಳಗ್ಗೆ ಹೃದಯಘಾತದಿಂದ ವಿಧಿವಶರಾದರು.

ಉಡುಪಿ ಜಿಲ್ಲೆಯ ಕುಂದಾಪುರ ನಾವುಂದ ಮಂಕಿ ಮನೆ ನಿವಾಸಿ ಶ್ರೀಯಾನ್ ಬೃಹನ್ಮುಂಬಯಿನಲ್ಲಿ ಸಮಾಜಪರ ಚಿಂತಕರಾಗಿ, ಅನನ್ಯ ಕಲಾಪ್ರೇಮಿ, ಕಲಾಪೋಷಕರಾಗಿ ಪ್ರಸಿದ್ಧಿ ಪಡೆದಿದ್ದರು. ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಮೊಗವೀರ ವ್ಯವಸ್ಥಾಪಕ ಮಂಡಳಿ ಮುಂಬಯಿ ಮತ್ತು ಕರ್ನಾಟಕ ಸಂಘ ಮುಂಬಯಿ ಸಂಸ್ಥೆಗಳಲ್ಲಿ, ಮೊಗವೀರ ಮಹಾಜನ ಸೇವಾ ಸಂಘ ಬಗ್ವಾಡಿ ಹೋಬಳಿ (ಮುಂಬಯಿ), ಕನ್ನಡಿಗ ಕಲಾವಿದರ ಪರಿಷತ್ತು ಮಹಾರಾಷ್ಟ್ರ ಮತ್ತಿತರ ಹತ್ತಾರು ತುಳು ಕನ್ನಡ ಸಂಘ ಸಂಸ್ಥೆಗಳಲ್ಲಿ ಪದಾಧಿಕಾರಿಯಾಗಿ, ಸಕ್ರಿಯ ಸೇವಾಕರ್ತರಾಗಿ ಶ್ರಮಿಸಿದ್ದರು. 

ಮೃತರು ಪತ್ನಿ (ಅರುಣೋದಯ ಕಲಾ ನಿಕೇತನ ಇದರ ನಿರ್ದೇಶಕಿ) ಗುರು  ಡಾ| ಮೀನಾಕ್ಷಿ ರಾಜು ಶ್ರೀಯಾನ್, ಇಬ್ಬರು ಪುತ್ರರು ಸೇರಿದಂತೆ ಅಪಾರ ಕಲಾವಿದ ಬಳಗ, ಬಂಧು ಮಿತ್ರರನ್ನು ಅಗಲಿದ್ದಾರೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News