ಹರೀಶ್ ಶೆಣೈ

Update: 2020-07-26 16:56 GMT

ಉಡುಪಿ, ಜು. 26: ಶೇರು ಉದ್ಯಮಿ, ಉಡುಪಿ ತೆಂಕಪೇಟೆ ನಿವಾಸಿ ಪಾಂಡುರಂಗ ಶೆಣೈಯವರ ಪುತ್ರ ಹರೀಶ್ ಶೆಣೈ (52) ಅಸೌಖ್ಯದಿಂದ ಜು. 26ರಂದು ಮಣಿಪಾಲ ಆಸ್ಪತ್ರೆಯಲ್ಲಿ ನಿಧನ ಹೊಂದಿದರು. ಮೃತರು ಪತ್ನಿ, ಪುತ್ರನನ್ನು ಅಗಲಿದ್ದಾರೆ.

ಮಣಿಪಾಲ ಐಸಿಡಿಎಸ್ ಸಂಸ್ಥೆ, ಉಡುಪಿಯ ಕಲ್ಪನಾ ಥಿಯೇಟರ್‌ನಲ್ಲಿ ನಿರ್ದೇಶಕರಾದ ಹರೀಶ್ ಶೆಣೈಯವರು, ವೆಂಕಟರಮಣ ದೇವಸ್ಥಾನದ ಭಜನಾ ಸಪ್ತಾಹವೂ ಸೇರಿದಂತೆ ವಿವಿಧ ಕಾರ್ಯಕ್ರಮಗಳಲ್ಲಿ ಸಕ್ರಿಯರಾಗಿ ತೊಡಗಿಸಿಕೊಂಡಿದ್ದರು.  ಹರೀಶ್ ಶೆಣೈಯವರು ಮಣಿಪಾಲ ಹರಿಟೇಜ್ ವಿಲೇಜ್ ರೂವಾರಿ ವಿಜಯನಾಥ ಶೆಣೈಯವರ ಅಣ್ಣನ ಮಗ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News

ವಸಂತಿ