ಶ್ರೀನಿವಾಸರಾಜು ಕಾವ್ಯ ಸ್ಪರ್ಧೆಗೆ ಹಸ್ತಪ್ರತಿ ಆಹ್ವಾನ
Update: 2020-07-27 17:54 GMT
ಬೆಂಗಳೂರು, ಜು.27: ಸಂಗಾತ ಸಾಹಿತ್ಯ ಪತ್ರಿಕೆ ವತಿಯಿಂದ ಚಿ.ಶ್ರೀನಿವಾಸರಾಜು ಕಾವ್ಯ ಸ್ಪರ್ಧೆಗೆ ಹಸ್ತಪ್ರತಿಗಳನ್ನು ಆಹ್ವಾನಿಸಲಾಗಿದೆ. 40 ವರ್ಷದೊಳಗಿನ ಕವಿಗಳು ಡಿಟಿಪಿ ಮಾಡಿದ ಹಸ್ತಪ್ರತಿ ಕಳುಹಿಸಬಹುದು.
ತೀರ್ಪುಗಾರರಿಂದ ಆಯ್ಕೆಯಾದ ಕವನ ಸಂಕಲನವನ್ನು ಪಿಪಿ ಗೆಳೆಯರ ಬಳಗದ ಸಹಯೋಗದಲ್ಲಿ ಪ್ರಕಟಿಸಲಾಗುವುದು. ಜಿ.ಪಿ.ರಾಜರತ್ನಂ ಜನ್ಮದಿನವಾದ ಡಿ.5ರಂದು ಬಹುಮಾನಕ್ಕೆ ಆಯ್ಕೆಯಾದ ಕಾವ್ಯಕೃತಿಯನ್ನು ಲೋಕಾರ್ಪಣೆ ಹಾಗೂ ಪ್ರಶಸ್ತಿ ಫಲಕ ನೀಡಿ ಗೌರವಿಸಲಾಗುತ್ತದೆ.
ಹಸ್ತಪ್ರತಿ ಕಳುಹಿಸಲು ಆ.25 ಕೊನೆಯ ದಿನವಾಗಿದೆ. ಹಸ್ತಪ್ರತಿಯನ್ನು sangaata2018@gmail.com ಗೆ ಕಳುಹಿಸಬೇಕು. ಈ ಕುರಿತು ಹೆಚ್ಚಿನ ಮಾಹಿತಿಗಾಗಿ ದೂ.9341757653ಕ್ಕೆ ಸಂಪರ್ಕಿಸಲು ಪ್ರಕಟನೆಯಲ್ಲಿ ತಿಳಿಸಲಾಗಿದೆ.