ಪೊಲೀಸರ ಕರ್ತವ್ಯಕ್ಕೆ ಅಡ್ಡಿ ಆರೋಪ: 9 ಮಂದಿಯ ಬಂಧನ

Update: 2020-07-28 12:38 GMT

ಬೆಂಗಳೂರು, ಜು.28: ಹಳೇ ದ್ವೇಷದಿಂದ ಸಹೋದರರ ಕೊಲೆಗೆ ಸುಪಾರಿ ಪಡೆದು ಸಂಚು ರೂಪಿಸುತ್ತಿದ್ದವರನ್ನು ಬಂಧಿಸಲು ತೆರಳಿದ್ದ ಪೊಲೀಸರ ಕರ್ತವ್ಯಕ್ಕೆ ಅಡ್ಡಿಪಡಿಸಿದ ಆರೋದಪಡಿ  9 ಜನರನ್ನು ಉತ್ತರ ವಿಭಾಗದ ರಾಜಗೋಪಾಲನಗರ ಠಾಣೆ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಕಾಮಾಕ್ಷಿಪಾಳ್ಯದ ಚೇತನ್‍ಕುಮಾರ್(31), ರಾಜು(26), ಅರ್ಜುನ್(27), ಓಬಳಯ್ಯ(25), ಸತೀಶ್‍ ಕುಮಾರ್(23), ಶಿವಕುಮಾರ್(31), ಅಮಿತ್(22), ನಾಗೇಶ್(30) ಮತ್ತು ದೇವರಾಜ್(31) ಬಂಧಿತ ಆರೋಪಿಗಳೆಂದು ಪೊಲೀಸರು ತಿಳಿಸಿದ್ದಾರೆ.

ರಾಜಗೋಪಾಲನಗರ ಠಾಣೆ ಪಿಎಸ್ಸೈ ಬಸವಲಿಂಗಪ್ಪ ಮತ್ತು ಸಿಬ್ಬಂದಿ ಸೋಮವಾರ ರಾತ್ರಿ ಇಲ್ಲಿನ ಪೀಣ್ಯ ಕೈಗಾರಿಕಾ ಪ್ರದೇಶ 2ನೆ ಮುಖ್ಯರಸ್ತೆಯಲ್ಲಿ ಗಸ್ತಿನಲ್ಲಿದ್ದರು.ಈ ವೇಳೆ 10ರಿಂದ 12 ಮಂದಿ ಗುಂಪುಗೂಡಿಕೊಂಡು ಕೊಲೆಗೆ ಸಂಚು ರೂಪಿಸುತ್ತಿದ್ದು ಕಂಡುಬಂದು ತಕ್ಷಣ ಅವರನ್ನು ಬಂಧಿಸಲು ಮುಂದಾದಾಗ ಸಿಬ್ಬಂದಿ ಸಿದ್ದರಾಮ ಮತ್ತು ಸುದರ್ಶನ್ ಅವರ  ಕರ್ತವ್ಯಕ್ಕೆ ಅಡ್ಡಿಪಡಿಸಿ ಅವರನ್ನು ಕೆಳಗೆ ತಳ್ಳಿ ಗಾಯಗೊಳಿಸಿದ್ದಾರೆ ಎನ್ನಲಾಗಿದೆ.

ತಕ್ಷಣ ಪೊಲೀಸರು ಮೂವರನ್ನು ಹಿಡಿದಿದ್ದು, ಉಳಿದವರು ತಪ್ಪಿಸಿಕೊಂಡು ಪರಾರಿಯಾಗಿದ್ದು ಆರೋಪಿಗಳನ್ನು ಠಾಣೆಗೆ ಕರೆತಂದು ಕೊಲೆಗೆ ಸಂಚು ಮತ್ತು ಪೊಲೀಸರ ಕರ್ತವ್ಯಕ್ಕೆ ಅಡ್ಡಿಪಡಿಸಿದ ಪ್ರಕರಣ ದಾಖಲಿಸಿಕೊಂಡು, ಆರೋಪಿಗಳನ್ನು ಬಂಧಿಸಿ ವಿಚಾರಣೆ ಮುಂದುವರಿಸಿದ್ದಾರೆ,

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News