ವಕೀಲನ ಮೇಲೆ ಮಹಿಳಾ ಎಎಸ್ಸೈ ಹಲ್ಲೆ: ಆರೋಪ

Update: 2020-08-03 17:37 GMT

ಬೆಂಗಳೂರು, ಆ.3: ಇಲ್ಲಿನ ತಿಲಕ್ ನಗರ ಪೊಲೀಸ್ ಠಾಣೆಯ ಮಹಿಳಾ ಎಎಸ್ಸೈಯೊಬ್ಬಾಕೆ ಹಿರಿಯ ವಕೀಲರ ಮೇಲೆ ಹಲ್ಲೆ ನಡೆಸಿರುವ ಗಂಭೀರ ಆರೋಪ ಕೇಳಿಬಂದಿದೆ.

ವಕೀಲ ಅನಿಲ್ ಕುಮಾರ್ ಎಂಬವರು ಪ್ರಕರಣವೊಂದರ ವಿಚಾರವಾಗಿ ಮಾಹಿತಿಗಾಗಿ ತಿಲಕ್ ನಗರ ಠಾಣೆಯ ಹೋಗುವಾಗ ಎಎಸ್ಸೈ ಅನೂಸೂಯ ಠಾಣಾ ವ್ಯಾಪ್ತಿಯಲ್ಲಿ ಬೇರೆಯವರಿಂದ ಹಣ ವಸೂಲಿ ಮಾಡುತ್ತಿದ್ದನ್ನು ನೋಡಿದ್ದಾರೆ. ಈ ವೇಳೆ ವಕೀಲ ಮೊಬೈಲ್‍ನಲ್ಲಿ ವಿಡಿಯೊ ಸೆರೆ ಹಿಡಿದಿರುವುದಾಗಿ ಆರೋಪಿಸಿ ಎಎಸ್‍ಐ, ಅನಿಲ್ ಕುಮಾರ್ ಮೇಲೆ ಹಲ್ಲೆ ನಡೆಸಿದ್ದಾರೆ ಎನ್ನಲಾಗಿದೆ.

ವಕೀಲನ ಮೇಲೆ ಹಲ್ಲೆ ಮಾಡಿದ ಎಎಸ್ಸೈ ಮೇಲೆ ಶಿಸ್ತು ಕ್ರಮ ಜರುಗಿಸುವಂತೆ ನಗರ ಹೆಚ್ಚುವರಿ ಆಯುಕ್ತ ಮುರುಗನ್ ಅವರಿಗೆ ವಕೀಲರು ದೂರು ನೀಡಿದ್ದಾರೆ. ಶಿಸ್ತು ಕ್ರಮ ಕೈಗೊಳ್ಳುವುದಾಗಿ ಆಯುಕ್ತರು ಭರವಸೆ ನೀಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News