ಯುಪಿಎಸ್‍ಸಿ ಫಲಿತಾಂಶ: 167ನೇ ರ‍್ಯಾಂಕ್ ಪಡೆದ ಬೆಂಗಳೂರಿನ ಕೀರ್ತನಾ

Update: 2020-08-04 14:58 GMT

ಬೆಂಗಳೂರು, ಆ.4: ಮಂಗಳವಾರ ಪ್ರಕಟವಾದ 2019ರ ಯುಪಿಎಸ್‍ಸಿ ಪರೀಕ್ಷೆಯ ಫಲಿತಾಂಶದಲ್ಲಿ ನಗರದ ನಾಗರಬಾವಿ ನಿವಾಸಿ ಕೀರ್ತನಾ ಎಚ್.ಎಸ್. ಅವರು 167ನೇ ರ‍್ಯಾಂಕ್ ಪಡೆದಿದ್ದಾರೆ.

ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಕೀರ್ತನಾ ಅವರು, ನನ್ನ ಹಾಗೂ ನನ್ನ ಪೋಷಕರ ಕನಸು ಇಂದು ನನಸಾಗಿದೆ. ಕನಸು ನನಸು ಮಾಡಿದ ಆ ದೇವರಿಗೆ ಧನ್ಯವಾದ ಹೇಳುತ್ತೇನೆ. ನನಗೆ ಬಂದಿರುವ ಶ್ರೇಯಾಂಕಕ್ಕೆ ಐಎಎಸ್ ಹುದ್ದೆ ಸಿಗುವ ವಿಶ್ವಾಸ ಇದೆ ಎಂದು ತಮ್ಮ ಸಂತಸ ಹಂಚಿಕೊಂಡಿದ್ದಾರೆ. ಕೀರ್ತನಾ ಅವರು ರಾಜ್‍ಕುಮಾರ್ ಅಕಾಡೆಮಿಯಲ್ಲಿ ಶಿಕ್ಷಕಿಯಾಗಿ ಆಗಿ ಕೆಲಸ ನಿರ್ವಹಿಸುತ್ತಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News