ಶ್ರೀನಿವಾಸ ವಾಗ್ಲೆ
Update: 2020-08-09 14:32 GMT
ಶಿರ್ವ, ಆ.9: ಪ್ರಗತಿಪರ ಕೃಷಿಕ, ಆರ್ಎಸ್ಬಿ ಸಮಾಜದ ಮುಂದಾಳು ಬಂಟಲ್ಲು ಸಮೀಪದ ಸಡಂಬೈಲು ನಿವಾಸಿ ಶ್ರೀನಿವಾಸ ವಾಗ್ಲೆ(80) ಅಲ್ಪಕಾಲದ ಅಸೌಖ್ಯದಿಂದ ಶನಿವಾರ ಸಂಜೆ ಉಡುಪಿ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು.
ಮೃತರು ಪತ್ನಿ, ಶ್ರೀಕ್ಷೇತ್ರ ಬಂಟಕಲ್ಲು ಶ್ರೀದುರ್ಗಾಪರಮೇಶ್ವರೀ ದೇವಳದ ಆಡಳಿತ ಮೊಕ್ತೇಸರ ಹಾಗೂ ಬೆಳ್ಳೆ ಗ್ರಾಪಂ ಮಾಜಿ ಅಧ್ಯಕ್ಷ ಶಶಿಧರ ವಾಗ್ಲೆ ಸಹಿತ ಮೂವರು ಪುತ್ರರು, ಇಬ್ಬರು ಪುತ್ರಿಯರು ಹಾಗೂ ಅಪಾರ ಬಂಧುಗಳನ್ನು ಅಗಲಿದ್ದಾರೆ.