ತಮಿಳುನಾಡು ಕಸ್ಟಡಿ ಸಾವು ಪ್ರಕರಣ: ಬಂಧನಕ್ಕೊಳಗಾಗಿದ್ದ ಎಸ್‍ಐ ಕೋವಿಡ್ ಸೋಂಕಿಗೆ ಬಲಿ

Update: 2020-08-10 07:27 GMT

ಚೆನ್ನೈ: ದೇಶಾದ್ಯಂತ ಆಕ್ರೋಶ ಸೃಷ್ಟಿಸಿದ್ದ ಸದಂಕುಲಂನಲ್ಲಿ ನಡೆದಿದ್ದ ಜಯರಾಜ್ ಮತ್ತು ಬೆನಿಕ್ಸ್ ಕಸ್ಟಡಿ ಸಾವು ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧಿಸಲ್ಪಟ್ಟಿದ್ದ  ವಿಶೇಷ ಎಸ್‍ಐ ಪೌಲ್‍ ದುರೈ (56) ಅವರು ಸೋಮವಾರ ಕೋವಿಡ್ ಸೋಂಕಿಗೆ ಬಲಿಯಾಗಿದ್ದಾರೆ.

ಅವರಿಗೆ ಕೋವಿಡ್ ಸೋಂಕು ದೃಢಪಟ್ಟ ನಂತರ ಅವರನ್ನು ಮಧುರೈ ಸರಕಾರಿ ರಾಜಾಜಿ ಆಸ್ಪತ್ರೆಗೆ ಚಿಕಿತ್ಸೆಗೆ ದಾಖಲಿಸಲಾಗಿತ್ತು.

ಕಸ್ಟಡಿ ಸಾವು ಪ್ರಕರಣಕ್ಕೆ ಸಂಬಂಧಿಸಿದಂತೆ ಪೌಲ್‍ ದುರೈ ಹಾಗೂ ನಾಲ್ಕು ಮಂದಿ ಇತರ  ಪೊಲೀಸ್ ಸಿಬ್ಬಂದಿಯನ್ನು ಸಿಬಿ-ಸಿಐಡಿ ಅಧಿಕಾರಿಗಳು ಜುಲೈ 8ರಂದು ಬಂಧಿಸಿದ್ದರು. ಪೌಲ್‍ ದುರೈ ಅವರಿಗೆ ಜುಲೈ 14ರಂದು ನ್ಯಾಯಾಂಗ ಬಂಧನ ವಿಧಿಸಿದ ನಂತರ ಅವರನ್ನು ಮಧುರೈ ಕೇಂದ್ರ ಕಾರಾಗೃಹದಲ್ಲಿರಿಸಲಾಗಿತ್ತು,. ಜುಲೈ 24ರಂದು ಅವರಿಗೆ ಕೋವಿಡ್ ಸೋಂಕು ದೃಢಪಟ್ಟಿತ್ತು,. ಮಧುಮೇಹ ಹಾಗೂ ಹೃದಯ ಸಂಬಂಧಿ ಕಾಯಿಲೆಯಿಂದ ಬಳಲುತ್ತಿದ್ದ ಅವರ ಸ್ಥಿತಿ ಶನಿವಾರದಿಂದ ಚಿಂತಾಜನಕವಾಗಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News