ಡಿಜೆ ಹಳ್ಳಿ ಠಾಣೆಗೆ ಆರ್‍ಎಎಫ್ ತಂಡ ಆಗಮನ

Update: 2020-08-12 17:35 GMT

ಬೆಂಗಳೂರು, ಆ.12: ಕಾವಲ್ ಭೈರಸಂದ್ರ ಗಲಾಟೆ ಪ್ರಕರಣ ಸಂಬಂಧ ಬಿಗುವಿನ ವಾತಾವರಣ ನಿರ್ಮಾಣವಾಗಿರುವ ಹಿನ್ನೆಲೆ ಡಿಜೆ ಹಳ್ಳಿ ಠಾಣೆಗೆ ಹೈದರಾಬಾದ್‍ನಿಂದ ಆರ್‍ಎಎಫ್ (ರ್ಯಾಪಿಡ್ ಆಕ್ಷನ್ ಫೋರ್ಸ್) ತಂಡದ ಸಿಬ್ಬಂದಿ ಆಗಮಿಸಿದ್ದಾರೆ.

ಬುಧವಾರ ಆಗಮಿಸಿದ 7 ವಾಹನಗಳಲ್ಲಿ 120ಕ್ಕೂ ಹೆಚ್ಚು ಆರ್‍ಎಎಫ್ ಸಿಬ್ಬಂದಿ ಆಗಮಿಸಿದ್ದು, ಡಿಜೆ ಹಳ್ಳಿ, ಕೆಜಿ ಹಳ್ಳಿ, ಕಾವಲ್‍ಭೈರಸಂದ್ರ, ಟ್ಯಾನರಿ ರಸ್ತೆಯಲ್ಲಿ ಬಂದೋಬಸ್ತ್ ಮಾಡಲಾಗಿದೆ.

ಇನ್ನು ಆರ್‍ಎಎಫ್ ಪಡೆಯ ಸಿಬ್ಬಂದಿ ಪುಲಿಕೇಶಿನಗರ ವ್ಯಾಪ್ತಿಯ ರಸ್ತೆಗಳಲ್ಲಿ ಮಾರ್ಚ್ ನಡೆಸಿ, ಗಮನ ಸೆಳೆದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News