ಎಸ್ಡಿಪಿಐಗೆ ಬಿಜೆಪಿ ಗಾಡ್ಫಾದರ್: ಯು.ಟಿ.ಖಾದರ್
Update: 2020-08-12 17:37 GMT
ಬೆಂಗಳೂರು, ಆ.12: ಬಿಜೆಪಿ ಪಕ್ಷವೇ ಎಸ್ಡಿಪಿಐ ಸಂಘಟನೆಗೆ ಗಾಡ್ಫಾದರ್. ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಪ್ರತಿಯೊಂದು ವಿಚಾರದಲ್ಲಿಯೂ ರಾಜಕಾರಣ ಮಾಡುತ್ತಾರೆ ಎಂದು ಮಾಜಿ ಸಚಿವ ಯು.ಟಿ.ಖಾದರ್ ಆರೋಪಿಸಿದ್ದಾರೆ.
ವಿಧಾನಸೌಧದಲ್ಲಿಂದು ಮಾತನಾಡಿದ ಅವರು, ನಳಿನ್ ಕುಮಾರ್ ಡಿ.ಜೆ.ಹಳ್ಳಿ ಘಟನೆಗೆ ಮಾಜಿ ಸಚಿವರೊಬ್ಬರು ಕಾರಣ ಎಂದು ಆರೋಪಿಸಿದ್ದಾರೆ. ಅವರು ಯಾರೆಂದು ನಳಿನ್ ಕುಮಾರ್ ಕಟೀಲ್ ಬಹಿರಂಗಪಡಿಸಲಿ. ಸಾಮಾಜಿಕ ಜಾಲತಾಣಗಳು ವಿಷಕಾರಕವಾಗಿವೆ. ಬೆಂಕಿ ಹಚ್ಚುವುದನ್ನು ಯಾವ ಧರ್ಮವೂ ಬೆಂಬಲಿಸಲ್ಲ. ಕಾನೂನಿಗೆ ವಿರುದ್ಧವಾಗಿ ನಡೆದುಕೊಳ್ಳುವ ಯಾವುದೇ ಸಂಘಟನೆಯಿರಲಿ ಸರಕಾರ ಅದನ್ನು ನಿಷೇಧ ಮಾಡಬೇಕು ಎಂದು ಯು.ಟಿ.ಖಾದರ್ ಆಗ್ರಹಿಸಿದ್ದಾರೆ.