ಪ್ರಚೋದನಕಾರಿ ಪೋಸ್ಟ್: ಆರೋಪಿ ನವೀನ್ 5 ದಿನ ಪೊಲೀಸ್ ವಶಕ್ಕೆ

Update: 2020-08-13 17:29 GMT

ಬೆಂಗಳೂರು, ಆ.13: ಕಾವಲ್ ಭೈರಸಂದ್ರ ಗಲಭೆ ಪ್ರಕರಣ ಸಂಬಂಧ ಪ್ರಚೋದನಕಾರಿ ಮತ್ತು ಅವಹೇಳನಕಾರಿ ಸಂದೇಶಗಳನ್ನು ಹರಿಬಿಟ್ಟಿದ್ದ ಆರೋಪಿ ಪಿ.ನವೀನ್‍ನನ್ನು ಐದು ದಿನಗಳ ಕಾಲ ಪೊಲೀಸ್ ವಶಕ್ಕೆ ಪಡೆಯಲಾಗಿದೆ.

ಮಂಗಳವಾರ ರಾತ್ರಿಯೇ ಈತನನ್ನ ವಶಕ್ಕೆ ಪಡೆದ ಪೊಲೀಸರು, ವಿಡಿಯೊ ಕಾನ್ಫರೆನ್ಸ್ ಮೂಲಕ ಮ್ಯಾಜಿಸ್ಟ್ರೇಟ್ ನ್ಯಾಯಾಧೀಶರ ಮುಂದೆ ಹಾಜರುಪಡಿಸಿದರು. ತದನಂತರ, ಹೆಚ್ಚಿನ ತನಿಖೆ ಅವಶ್ಯಕತೆ ಇರುವ ಕಾರಣ ಆರೋಪಿಯನ್ನು ಆ.17ರವರೆಗೂ ವಶಕ್ಕೆ ಪಡೆದಿದ್ದಾರೆ.

ಮತ್ತೊಂದು ಪೋಸ್ಟ್?: ಘಟನೆಗೆ ಸಂಬಂಧಿಸಿದಂತೆ ಬಂಧಿತನಾಗಿರುವ ನವೀನ್ ಫೇಸ್‍ಬುಕ್ ಖಾತೆಯಿಂದ ಕಳೆದ 15 ಗಂಟೆಗಳ ಹಿಂದೆ ಮತ್ತೊಂದು ಪೋಸ್ಟ್ ಶೇರ್ ಆಗಿರುವುದು ಅನುಮಾನ ಮೂಡಿಸಿದೆ.

ವಿವಾದಾತ್ಮಕ ಪೋಸ್ಟ್ ಹಾಕಿದ ಆರೋಪದ ಹಿನ್ನೆಲೆಯಲ್ಲಿ ನವೀನ್‍ನನ್ನು ಆ.11ರ ರಾತ್ರಿಯೇ ವಶಕ್ಕೆ ಪಡೆಯಲಾಗಿದೆ. ಕಳೆದ 30 ಗಂಟೆಗಳಿಂದ ಆತ ಪೊಲೀಸರ ವಶದಲ್ಲಿದ್ದಾನೆ. ಅಲ್ಲದೇ ಆರೋಪಿ ತನ್ನ ಮೊಬೈಲ್ ಕಳೆದುಹೋಗಿದೆ ಎಂದು ಹೇಳಿಕೆ ನೀಡುತ್ತಿದ್ದಾನೆ. ಹೀಗಿರುವಾಗ ಹದಿನೈದು ಗಂಟೆಗಳ ಹಿಂದೆ ಆತನ ಫೇಸ್‍ಬುಕ್ ಖಾತೆಯಿಂದ ಪೋಸ್ಟ್ ವೊಂದು ಶೇರ್ ಆಗಿದ್ದು, ಅನುಮಾನಕ್ಕೆ ಎಡೆಮಾಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News