ಕಾವಲ್ ಭೈರಸಂದ್ರ ಹಿಂಸಾಚಾರ ಪ್ರಕರಣ: ಮತ್ತೆ ಹಲವರ ಬಂಧನ

Update: 2020-08-15 12:10 GMT

ಬೆಂಗಳೂರು, ಆ.15: ಕಾಲವ್ ಭೈರಸಂದ್ರ ಹಿಂಸಾಚಾರ ಪ್ರಕರಣ ಸಂಬಂಧ ಶುಕ್ರವಾರ ತಡರಾತ್ರಿ ಹಲವು ಆರೋಪಿಗಳನ್ನು ಪೊಲೀಸರು, ಬಂಧಿಸಿ ವಿಚಾರಣೆಗೊಳಪಡಿಸಿದ್ದಾರೆ.

ಎಸಿಪಿ ರವಿಪ್ರಸಾದ್ ನೇತ್ರತ್ವದಲ್ಲಿ ಕಾರ್ಯಾಚರಣೆ ನಡೆಸಿರುವ ಪೊಲೀಸರು ತಂಡ, ಡಿ.ಜೆ ಹಳ್ಳಿಯಲ್ಲಿ 34 ಹಾಗೂ ಕೆ.ಜಿ ಹಳ್ಳಿಯಲ್ಲಿ 50 ಆರೋಪಿಗಳು ಸೇರಿ ಒಟ್ಟು 84 ಆರೋಪಿಗಳನ್ನು ಬಂಧಿಸಿದ್ದಾರೆ ಎಂದು ವರದಿಯಾಗಿದೆ.

ಡಿ.ಜೆ ಹಳ್ಳಿ ಪೊಲಿಸರು ಘಟನೆಯ ವಿಡಿಯೊಗಳನ್ನು ಪರಿಶೀಲನೆ ನಡೆಸಿ ಕಾರ್ಯಾಚರಣೆ ನಡೆಸುತ್ತಿದ್ದಾರೆ. ಅಲ್ಲದೇ ಬಂಧಿತ ಆರೋಪಿಗಳಿಗೆ ಘಟನೆಯ ವಿಡಿಯೊ ತೋರಿಸಿ ಮತ್ತೆ ಕೆಲವು ಆರೋಪಿಗಳನ್ನು ಪತ್ತೆ ಮಾಡಿದ್ದಾರೆ ಎಂದು ಹೇಳಲಾಗುತ್ತಿದೆ.

ಪೊಲೀಸರ ಕಣ್ತಪ್ಪಿಸಲು ಆರೋಪಿಗಳು, ಮೊಬೈಲ್ ಡೇಟಾಗಳನ್ನು ಡಿಲೀಟ್ ಮಾಡಿದ್ದಾರೆ ಎನ್ನಲಾಗಿದ್ದು, ಸದ್ಯ ಡಿಜೆ ಹಳ್ಳಿ ಠಾಣೆಗೆ ಕರೆತಂದಿರುವ 34 ಆರೋಪಿಗಳಿಗೆ, ಕೋವಿಡ್-19 ಪರೀಕ್ಷೆಗೆ ಒಳಪಡಿಸಲು ಅಧಿಕಾರಿಗಳು ಮುಂದಾಗಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News