ಕಾವಲ್ ಭೈರಸಂದ್ರ ಹಿಂಸಾಚಾರ ಪ್ರಕರಣ: ತಲೆಮರೆಸಿಕೊಂಡಿದ್ದ 8 ಆರೋಪಿಗಳ ಬಂಧನ

Update: 2020-08-16 16:12 GMT

ಬೆಂಗಳೂರು, ಆ.16: ಇಲ್ಲಿನ ಕಾವಲ್ ಭೈರಸಂದ್ರ ಗಲಾಟೆ ಪ್ರಕರಣ ಸಂಬಂಧ ತಲೆಮರೆಸಿಕೊಂಡಿದ್ದ ಎಂಟು ಪ್ರಮುಖ ಆರೋಪಿಗಳನ್ನು ಬಂಧಿಸಿರುವ ಸಿಸಿಬಿ ಪೊಲೀಸರು, ರವಿವಾರ ವಿಚಾರಣೆಗೊಳಪಡಿಸಿದ್ದಾರೆ

ಇಲ್ಲಿನ ನಾಗವಾರ ವ್ಯಾಪ್ತಿಯ ಎಸ್‍ಡಿಪಿಐ ಕಚೇರಿ ಎನ್ನಲಾದ ಕಟ್ಟಡದಲ್ಲಿ ತಡರಾತ್ರಿ ಕಾರ್ಯಾಚರಣೆ ನಡೆಸಿದ ಪೊಲೀಸರು, ಎಂಟು ಮಂದಿಯನ್ನು ಬಂಧಿಸಿ, ವೈದ್ಯಕೀಯ ಹಾಗೂ ಕೋವಿಡ್-19 ಪರೀಕ್ಷೆಗೆ ಒಳಪಡಿಸಲಾಗಿದೆ ಎಂದು ತಿಳಿದುಬಂದಿದೆ.

ಬಂಧಿತರ ಪೈಕಿ ಆರೋಪಿ ಸಲೀಂ ಎಂಬಾತ ಡಿ.ಜೆ ಹಾಗೂ ಕೆ.ಜಿ.ಹಳ್ಳಿ ಠಾಣೆಗಳ ಬಳಿ ಪಕ್ಷದ ಕಾರ್ಯಕರ್ತರಿಗೆ ಬರುವಂತೆ ಆಹ್ವಾನಿಸಿದ್ದ  ಆರೋಪದಡಿ ಸಿಸಿಬಿ ಪೊಲೀಸರು ಬಂಧಿಸಿದ್ದಾರೆ ಎನ್ನಲಾಗಿದೆ. ವಿಚಾರಣೆಗೊಳಪಡಿಸಿದ ಬಳಿಕ ಆರೋಪಿಯ ಮೊಬೈಲ್ ನಲ್ಲಿದ್ದ ಗಲಭೆ ದೃಶ್ಯಾವಳಿ ವಿಡಿಯೊ ತನಿಖಾಧಿಕಾರಿಗಳಿಗೆ ಲಭ್ಯವಾಗಿದೆ ಎಂದು ತಿಳಿದು ಬಂದಿದೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News