ತುಂಬೆ ಅಹ್ಮದ್ ಹಾಜಿ ನಿಧನಕ್ಕೆ ಬ್ಯಾರೀಸ್ ವೆಲ್ಫೇರ್ ಫೋರಂ ಸಂತಾಪ

Update: 2020-08-17 12:30 GMT

ಮಂಗಳೂರು, ಆ.17: ಹಿರಿಯ ಉದ್ಯಮಿ, ಸಾಮಾಜಿಕ ಧಾರ್ಮಿಕ ಧುರೀಣ, ಶೈಕ್ಷಣಿಕ ಕ್ಷೇತ್ರದ ಸಾಧಕ ಬಿ.ಎ. ಸಮೂಹ ಸಂಸ್ಥೆಗಳ ಸ್ಥಾಪಕ ಬಿ.ಅಹ್ಮದ್ ಹಾಜಿ ಮೊಹಿಯುದ್ದೀನ್ ತುಂಬೆ ಅವರ ನಿಧನಕ್ಕೆ ಬ್ಯಾರೀಸ್ ವೆಲ್ಫೇರ್ ಫೋರಂ ಸಂತಾಪ ವ್ಯಕ್ತಪಡಿಸಿದೆ.

ನಿಸ್ವಾರ್ಥ, ಉದಾತ್ತ ಮನೋಭಾವದ ಸಮಾಜ ಸೇವಕರಾಗಿದ್ದ ಅಹ್ಮದ್ ಹಾಜಿ ಶೈಕ್ಷಣಿಕ ಕ್ಷೇತ್ರದ ಸಾಧಕರಾಗಿ, ಹಿರಿಯ ಉದ್ಯಮಿಯಾಗಿ ಗುರುತಿಸಿಕೊಂಡಿದ್ದರು. ಆರೋಗ್ಯ ಸೇವೆ ಮತ್ತು ಶಿಕ್ಷಣದ ಮೂಲಕ ಗ್ರಾಮೀಣ ಪ್ರದೇಶದ ಮತ್ತು ಅಲ್ಪಸಂಖ್ಯಾತರ ಸಾಮಾಜಿಕ ಅಭಿವೃದ್ಧಿಗೆ ಅವರು ನೀಡಿರುವ ಕೊಡುಗೆ, ಸಮರ್ಪಣಾ ಮನೋಭಾವದ ಸೇವೆ ಪ್ರಶಂಸನೀಯ. ಶೈಕ್ಷಣಿಕ, ಸಾಮಾಜಿಕ, ಧಾರ್ಮಿಕ ಕ್ಷೇತ್ರಗಳಲ್ಲಿನ ಮುಂದಾಳುವಾಗಿದ್ದ ಬಿ.ಅಹ್ಮದ್ ಹಾಜಿಯವರ ಅಗಲುವಿಕೆ ತುಂಬಲಾಗದ ನಷ್ಟ ಎಂದು ಬ್ಯಾರೀಸ್ ವೆಲ್ಫೇರ್ ಫೋರಂ ಅಧ್ಯಕ್ಷ ಮುಹಮ್ಮದ್ ಅಲಿ ಉಚ್ಚಿಲ್ ಹಾಗು ಪದಾಧಿಕಾರಿಗಳು, ಸದಸ್ಯರು ಸಂತಾಪ ವ್ಯಕ್ತಪಡಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News