ಜಿ. ದಿನೇಶ್ ಶೆಣೈ ಮೂಡುಬಿದಿರೆ
Update: 2020-08-18 17:47 GMT
ಮೂಡುಬಿದಿರೆ: ಇಲ್ಲಿನ ಮೆ. ಜಿ.ಶ್ರೀಧರ ಶೆಣೈ ಆ್ಯಂಡ್ ಸನ್ಸ್ ( ಜಿ.ಎಸ್.) ಸಂಸ್ಥೆಯ ಪಾಲುದಾರ ಜಿ. ದಿನೇಶ್ ಶೆಣೈ (71) ತಮ್ಮ ನಿವಾಸದಲ್ಲಿ ಇಂದು ನಿಧನ ಹೊಂದಿದರು.
ಅವರು ಪತ್ನಿ, ಇಬ್ಬರು ಪುತ್ರಿಯರನ್ನು ಅಗಲಿದ್ದಾರೆ.
ಎಂಜಿನಿಯರಿಂಗ್ ಶಿಕ್ಷಣ ಪಡೆದಿದ್ದ ಅವರು ಕಳೆದ ನಾಲ್ಕೂವರೆ ದಶಕಗಳಿಂದ ಮನೆತನದ ಜಿ.ಎಸ್. ಉದ್ಯಮ ಸಂಸ್ಥೆಯನ್ನು ಮುನ್ನಡೆಸಿದ್ದರು. ಕೃಷಿಕರಾಗಿ, ಜನ ಸಂಘ, ಆರೆಸ್ಸೆಸ್ನಲ್ಲಿ ಸಕ್ರಿಯ ಕಾರ್ಯಕರ್ತರಾಗಿ ನಗರ ಕಾರ್ಯವಾಹರಾಗಿಯೂ ಸೇವೆ ಸಲ್ಲಿಸಿದ್ದರು. ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿಯಲ್ಲೂ ತೊಡಗಿಸಿಕೊಂಡಿದ್ದ ಅವರು ಜ್ಯೋತಿಷ್ಯ, ಸನಾತನ ಬಳಗ ಹೀಗೆ ಸಮಾಜ ಸೇವೆ, ಆಧ್ಯಾತ್ಮ ರಂಗಗಳಲ್ಲಿ ಗುರುತಿಸಿಕೊಂಡಿದ್ದರು.
ಜಿ.ದಿನೇಶ್ ಶೆಣೈ ಅವರ ನಿಧನಕ್ಕೆ ಸಾಂಸದ ನಳಿನ್ ಕುಮಾರ್ ಕಟೀಲ್, ಜಿಲ್ಲಾ ಬಿಜೆಪಿ ಅಧ್ಯಕ್ಷ ಸುದರ್ಶನ ಎಂ, ಶಾಸಕ ಉಮಾನಾಥ ಕೋಟ್ಯಾನ್, ಮೂಡುಬಿದಿರೆ ತಾಲೂಕು ಸಂಘ ಚಾಲಕ ಎನ್.ವಿವೇಕಾನಂದ ಕಾಮತ್ ಮತ್ತಿತರರು ಸಂತಾಪ ವ್ಯಕ್ತಪಡಿಸಿದ್ದಾರೆ.