ವಿನಯಾ ರಾಜು
Update: 2020-09-05 16:00 GMT
ಉದ್ಯಾವರ, ಸೆ.5: ಉದ್ಯಾವರ ಗುಡ್ಡೆಯಂಗಡಿ ಜಾಜಿಹಿತ್ಲು ನಿವಾಸಿ ವಿನಯಾ ರಾಜು (66) ಅವರು ಸೆ.5ರಂದು ಅನಾರೋಗ್ಯದಿಂದ ಆಸ್ಪತ್ರೆಯಲ್ಲಿ ನಿಧನರಾದರು. ಮೃತರು ಪುತ್ರ, ಪುತ್ರಿ, ಸೊಸೆ ಮತ್ತು ಮೊಮ್ಮಕ್ಕಳು ಹಾಗೂ ಅಪಾರ ಬಂಧುಗಳನ್ನು ಅಗಲಿದ್ದಾರೆ.
ವಿನಯಾ ರಾಜು ಕಾಂಗ್ರೆಸ್ ಪಕ್ಷದ ಸಕ್ರಿಯ ಕಾರ್ಯಕರ್ತರಾಗಿದ್ದು, ಮಾಜಿ ಪಂಚಾಯತ್ ಸದಸ್ಯರಾಗಿ, ಉದ್ಯಾವರ ಪ್ರೆಂಡ್ಸ್ ಸರ್ಕಲ್, ಉದ್ಯಾವರ ಮಹಿಳಾ ಮಂಡಲಗಳ ಸದಸ್ಯೆಯಾಗಿ ಸೇವೆ ಸಲ್ಲಿಸಿದ್ದಾರೆ.
ವಿನಯಾ ರಾಜು ನಿಧನಕ್ಕೆ ಮಾಜಿ ಕೇಂದ್ರ ಸಚಿವ ಆಸ್ಕರ್ ಫೆರ್ನಾಂಡಿಸ್, ಮಾಜಿ ಸಚಿವ ವಿನಯ ಕುಮಾರ್ ಸೊರಕೆ, ಉದ್ಯಾವರ ಗ್ರಾಮೀಣ ಕಾಂಗ್ರೆಸ್ ಅಧ್ಯಕ್ಷ ಗಿರೀಶ್ ಕುಮಾರ್ ಉದ್ಯಾವರ್, ಮಾಜಿ ಅಧ್ಯಕ್ಷ ಉದ್ಯಾವರ ನಾಗೇಶ್ ಕುಮಾರ್, ಗ್ರಾಪಂನ ಮಾಜಿ ಅಧ್ಯಕ್ಷೆ ಸುಗಂಧಿ ಶೇಖರ್, ಉಪಾಧ್ಯಕ್ಷ ರಿಯಾಝ್ ಪಳ್ಳಿ ಸಂತಾಪ ಸೂಚಿಸಿದ್ದಾರೆ.