ಸಮೃದ್ಧಿ ಯೋಜನೆಯಡಿ ಅರ್ಜಿ ಆಹ್ವಾನ

Update: 2020-09-11 14:03 GMT

ಬೆಂಗಳೂರು, ಸೆ. 11: ಮಹಿಳಾ ಅಭಿವೃದ್ಧಿ ನಿಗಮವು 2019-20ನೆ ಸಾಲಿನ `ಸಮೃದ್ಧಿ ಯೋಜನೆ'ಯಡಿ ಬಳಕೆಯಾಗದ ಅನುದಾನದಡಿ ಬೀದಿ ಬದಿಯ ಸಣ್ಣ ವಾಪಾರ ಮಾಡುತ್ತಿರುವ ಬಡತನ ರೇಖೆಗಿಂತ ಕೆಳಗಿರುವ 18 ರಿಂದ 60 ವರ್ಷ ವಯೋಮಾನದ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಬೀದಿಬದಿ ಮಹಿಳಾ ವ್ಯಾಪಾರಿಗಳಿಂದ ಅರ್ಜಿ ಆಹ್ವಾನಿಸಿದೆ.

ಈ ಯೋಜನೆಯಡಿ ಫಲಾನುಭವಿಗಳಿಗೆ 10 ಸಾವಿರ ರೂ.ಗಳ ಪ್ರೋತ್ಸಾಹಧನವನ್ನು ನೀಡಲಾಗುತ್ತದೆ. ನಿಗದಿತ ಅರ್ಜಿಗಳನ್ನು ಸೆ.14ರಿಂದ 19ರ ವರೆಗೆ ವಿತರಿಸಲಾಗುವುದು. ಹಾಗೂ ಭರ್ತಿಯಾದ ಅರ್ಜಿಗಳನ್ನು ಸೆ.28ರ ಸಂಜೆ 5.30 ರೊಳಗಾಗಿ ಸಲ್ಲಿಸಬೇಕು. ಅವಧಿ ಮುಗಿದ ನಂತರ ಬರುವ ಅರ್ಜಿಗಳನ್ನು ತಿರಸ್ಕರಿಸಲಾಗುವುದು. ಹೆಚ್ಚಿನ ಮಾಹಿತಿಗಾಗಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕರ ಕಚೇರಿ, ಕಿದ್ವಾಯಿ ಆಸ್ಪತ್ರೆ ಹತ್ತಿರ, ಸುಧಾರಣ ಸಂಸ್ಥೆಗಳ ಸಂಕೀರ್ಣ, ಹೊಸೂರು ರಸ್ತೆ, ಧರ್ಮಾವರಂ ಕಾಲೇಜು (ಅ). ಬೆಂಗಳೂರು ನಗರ ಜಿಲ್ಲೆ. ದೂ.ಸಂಖ್ಯೆ: 080-2657 8688ಗೆ ಸಂಪರ್ಕಿಸುವುದು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News