ಸ್ವಾಮಿ ಅಗ್ನಿವೇಶ್ ನಿಧನ: ಜನಪರ ಚಳವಳಿಯು ಒಬ್ಬ ಯೋಧನನ್ನು ಕಳೆದುಕೊಂಡಿದೆ; ಎಐಟಿಯುಸಿ

Update: 2020-09-12 18:14 GMT

ಬೆಂಗಳೂರು, ಸೆ. 12: ಸಾಮಾಜಿಕ ಹೋರಾಟಗಾರರಾಗಿದ್ದ ಸ್ವಾಮಿ ಅಗ್ನಿವೇಶ್ ಅವರ ನಿಧನಕ್ಕೆ ಅಲ್ ಇಂಡಿಯಾ ಟ್ರೇಡ್ ಯೂನಿಯನ್ ಕಾಂಗ್ರೆಸ್(ಎಐಟಿಯುಸಿ) ಅಧ್ಯಕ್ಷ ಎಚ್.ವಿ.ಅನಂತಸುಬ್ಬರಾವ್ ಕಂಬನಿ ಮಿಡಿದಿದ್ದಾರೆ.

ಅಗ್ನಿವೇಶ್ ಅವರು ಕೋಮುವಾದದ ವಿರುದ್ಧವಾಗಿ ನಿರಂತರವಾಗಿ ಧ್ವನಿ ಎತ್ತಿದ್ದರು. ಅವರೊಬ್ಬ ಸಾಮಾಜಿಕ ಚಿಂತಕರಾಗಿ, ಜೀತಪದ್ಧತಿ ವಿರುದ್ಧ ಪ್ರಬಲ ಚಳವಳಿ ನಡೆಸಿದ್ದರು. ತಮ್ಮ ಬದುಕನ್ನೇ ಹೋರಾಟಕ್ಕೆ ಸಮರ್ಪಿಸಿಕೊಂಡಿದ್ದರು. ಅವರ ಜನಪರ, ಜಾತ್ಯತೀತ ನಿಲುವಿನಿಂದ ಸಂಘ ಪರಿವಾರದ ದಾಳಿಗೆ ಒಳಗಾಗಿದ್ದರು. ಅವರ ನಿಧನದಿಂದ ಜನಪರ ಚಳವಳಿಯು ತನ್ನ ಒಬ್ಬ ಕಟ್ಟಾ ಯೋಧನನ್ನು ಕಳೆದುಕೊಂಡಿದೆ ಎಂದು ಅನಂತಸುಬ್ಬರಾವ್ ಅವರನ್ನು ನೆನಪು ಮಾಡಿಕೊಂಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News