ಬಿಬಿಎಂಪಿ ಕೊರೋನ ಆರೋಗ್ಯಾಧಿಕಾರಿಯಿಂದ ಕಿರುಕುಳ ಆರೋಪ: ಕ್ರಮಕ್ಕೆ ಒತ್ತಾಯ

Update: 2020-09-16 18:13 GMT

ಬೆಂಗಳೂರು, ಸೆ.16: ಬಿಬಿಎಂಪಿ ಕೊರೋನ ಆರೋಗ್ಯಾಧಿಕಾರಿ ಡಾ. ಕೀರ್ತಿ ಪ್ರಸಾದ್ ಅವರು ಆರೋಗ್ಯ ಸಿಬ್ಬಂದಿಗಳ ಮೇಲೆ ದಬ್ಬಾಳಿಕೆ ಹಾಗೂ ಮಾನಸಿಕ ಕಿರುಕುಳ ನೀಡುತ್ತಿದ್ದಾರೆ ಎಂದು ಆರೋಪಿಸಿ ಮಾಗಡಿ ರಸ್ತೆಯಲ್ಲಿರುವ ಯುಪಿಎಚ್‍ಸಿ ಸಿಬ್ಬಂದಿಗಳು ಬಿಬಿಎಂಪಿಯ ಸಿಪಿಎಂಒ ಮತ್ತು ಎಮ್.ಒ.ಎಚ್‍ಗೆ ಪತ್ರ ಬರೆದಿದ್ದಾರೆ.

ಕೊರೋನ ಹಿನ್ನೆಲೆ ಹಗಲು ರಾತ್ರಿ ಎನ್ನದೇ ಮಾಗಡಿ ರಸ್ತೆಯಲ್ಲಿರುವ ಯುಪಿಎಚ್‍ಸಿಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದೇವೆ. ಅಲ್ಲದೇ ಕಳೆದ 10 ವರ್ಷಗಳಿಂದ ಪಾರದರ್ಶಕವಾಗಿ ಕೆಲಸ ನಿರ್ವಹಿಸುತ್ತಿದ್ದೇವೆ. ಆದರೆ, ಡಾ. ಕೀರ್ತಿಪ್ರಸಾದ್ ಅವರು ಮಹಿಳೆಯರೆಂದು ಪರಿಗಣಿಸದೇ ಮಾನಸಿಕ ಹಿಂಸೆ ನೀಡುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.

ಡಾ. ಕೀರ್ತಿ ಪ್ರಸಾದ್ ಅವರು ಸಿಬ್ಬಂದಿಗಳ ಮೇಲೆ ತಾರತಮ್ಯ ಮಾಡುತ್ತಿದ್ದಾರೆ. ಇದರಿಂದ ಸಿಬ್ಬಂದಿ ಖಿನ್ನತೆಗೆ ಒಳಗಾಗುತ್ತಿದ್ದಾರೆ. ಆದ್ದರಿಂದ ಇವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಪತ್ರದ ಮೂಲಕ ಒತ್ತಾಯಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News