ಗೋದಾಮಿನಿಂದ ಸಿಗರೇಟ್ ಕದ್ದು ಮಾರಾಟ: ಆರೋಪಿ ಸೆರೆ

Update: 2020-09-18 18:12 GMT

ಬೆಂಗಳೂರು, ಸೆ.18: ಗೋದಾಮಿನಲ್ಲಿ ಕಳವು ಮಾಡಿದ ಸಿಗರೇಟ್‍ಗಳನ್ನ ಕಡಿಮೆ ಬೆಲೆಗೆ ಮಾರಾಟ ಮಾಡುತ್ತಿದ್ದ ಆರೋಪದಡಿ ಓರ್ವನನ್ನು ಇಲ್ಲಿನ ದಾಬಸ್‍ಪೇಟೆ ಠಾಣಾ ಪೊಲೀಸರು ಬಂಧಿಸಿದ್ದಾರೆ.

ನೆಲಮಂಗಲದ ರಾಮಕೃಷ್ಣಪ್ಪ ಬಂಧಿತ ಆರೋಪಿ ಎಂದು ತಿಳಿದುಬಂದಿದೆ.

ದಾಬಸ್‍ಪೇಟೆ ಬಳಿಯ ಐಟಿಸಿ ಗೋದಾಮಿನಿಂದ ಮತ್ತೊಬ್ಬ ಆರೋಪಿ ಅನಿಲ್ ಸೇರಿ ಸಿಗರೇಟ್‍ಗಳನ್ನು ಕಳ್ಳತನ ಮಾಡುತ್ತಿದ್ದು, ಬಂಧಿತನಿಂದ 2 ಲಕ್ಷ ನಗದನ್ನು ವಶಪಡಿಸಿಕೊಳ್ಳಲಾಗಿದೆ. ಪ್ರಮುಖ ಆರೋಪಿ ಅನಿಲ್ ಪರಾರಿಯಾಗಿದ್ದು, ಆತನಿಗಾಗಿ  ತೀವ್ರ ಶೋಧ ನಡೆಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಆರೋಪಿಗಳು ಕಳವು ಮಾಡಿದ ಸಿಗರೇಟ್‍ಗಳನ್ನ ಲಾರಿ ಚಾಲಕರಿಗೆ ಮಾರಾಟ ಮಾಡಿ ಬಂದ ಹಣವನ್ನು ಹಳೆಯ ಗುಡಿಸಲಿನ ಬ್ಯಾಗ್‍ನಲ್ಲಿ ಶೇಖರಣೆ ಮಾಡಿದ್ದರು ಎನ್ನುವ ಮಾಹಿತಿ ವಿಚಾರಣೆಯಲ್ಲಿ ಬೆಳಕಿಗೆ ಬಂದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News