ಸರಗಳ್ಳತನ ಆರೋಪಿಯ ಬಂಧನ: 15.25 ಲಕ್ಷ ರೂ. ಮೌಲ್ಯದ ಚಿನ್ನಾಭರಣ ಜಪ್ತಿ

Update: 2020-09-19 18:21 GMT

ಬೆಂಗಳೂರು, ಸೆ.19: ಸರಗಳ್ಳತನ ಆರೋಪ ಪ್ರಕರಣ ಸಂಬಂಧ ಓರ್ವನನ್ನು ಬಂಧಿಸಿರುವ ಹೊಸಕೋಟೆ ಉಪ ವಿಭಾಗದ ಆವಲಹಳ್ಳಿ ಠಾಣಾ ಪೆÇಲೀಸರು ಬಂಧಿತನಿಂದ 15,25000 ರೂ. ಮೌಲ್ಯದ 305 ಗ್ರಾಂ ಚಿನ್ನ ಹಾಗೂ 82 ಗ್ರಾಂ ಬೆಳ್ಳಿಯ ಆಭರಣ ಜಪ್ತಿ ಮಾಡಿದ್ದಾರೆ.

ರಾಮಮೂರ್ತಿನಗರದ ಮುನೇಶ್ವರ ಬಡಾವಣೆ ನಿವಾಸಿ ಸುರೇಶ್ ಯಾನೆ ಅಪ್ಪಿ ಬಂಧಿತ ಆರೋಪಿ ಎಂದು ಕೇಂದ್ರ ವಲಯ ಐಜಿಪಿ ಸೀಮಂತ್ ಕುಮಾರ್ ಸಿಂಗ್ ತಿಳಿಸಿದ್ದಾರೆ.

ಆವಲಹಳ್ಳಿ ಪೊಲೀಸ್ ಠಾಣಾ ಸರಹದ್ದಿನಲ್ಲಿ ಒಂದು ಸರಗಳ್ಳತನ ಸೇರಿ ಒಟ್ಟು 8 ಪ್ರಕರಣಗಳಲ್ಲಿ ಈತನ ಹೆಸರಿದ್ದು ತನಿಖೆ ಮುಂದುವರಿಸಲಾಗಿದೆ ಎಂದು ಅವರು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News