ಕರ್ತವ್ಯ ಲೋಪ ಆರೋಪ: ಡಿಪಿಎಸ್ ಮೇಲ್ವಿಚಾರಕ ಅಮಾನತು

Update: 2020-09-22 17:04 GMT

ಬೆಂಗಳೂರು, ಸೆ.22: ಮಹಾಲಕ್ಷ್ಮಿಪುರಂ ವಿಭಾಗದ ವಾರ್ಡ್ 67ರ ನಾಗಪುರ ವಾರ್ಡಿನಲ್ಲಿ ಡಿಪಿಎಸ್ ಮೇಲ್ವಿಚಾರಕರಾಗಿ ಕಾರ್ಯನಿರ್ವಹಿಸುತ್ತಿದ್ದ ಯೋಗೇಶ್ ಕರ್ತವ್ಯಲೋಪವೆಸಗಿದ ಹಿನ್ನೆಲೆಯಲ್ಲಿ ಕರ್ತವ್ಯದಿಂದ ಅಮಾನತು ಮಾಡಲಾಗಿದೆ.

ಘನತ್ಯಾಜ್ಯ ನಿರ್ವಹಣೆ ಡಿಪಿಎಸ್ ಮೇಲ್ವಿಚಾರಕರಾಗಿ ಕಾರ್ಯನಿರ್ವಹಿಸುತ್ತಿದ್ದ ಯೋಗೇಶ್ ಅವರು ಪೌರಕಾರ್ಮಿಕರಿಗೆ ಹಾಜರಾತಿ ನೀಡಲು ಹಣ ಕೇಳಿದ್ದಾರೆ ಎಂಬ ಆರೋಪದ ಹಿನ್ನೆಲೆ ಅವರನ್ನು ಕರ್ತವ್ಯದಿಂದ ಅಮಾನತು ಮಾಡಲಾಗಿದೆ.

ಇವರ ವಿರುದ್ಧ ಮಹಾಲಕ್ಷ್ಮಿ ಲೇಔಟ್ ಪೊಲಿಸ್ ಠಾಣಿಯಲ್ಲಿ ಪ್ರಕರಣ ದಾಖಲಾಗಿದ್ದು, ಕರ್ತವ್ಯ ಲೋಪವೆಸಗುವವರ ಮೇಲೆ ಬಿಬಿಎಂಪಿಯು ಕ್ರಮ ಕೈಗೊಳ್ಳಲಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News