ವಿದ್ವಾನ್ ಕೆ.ಗೋಪಾಲಕೃಷ್ಣ ಆಚಾರ್ಯ

Update: 2020-09-23 12:47 GMT

 ಉಡುಪಿ, ಸೆ.23: ಕಾರ್ಕಳದ ಹಿರಿಯ ವೈದಿಕ ವಿದ್ವಾಂಸ ಕೋಣಂದೂರು ಗೋಪಾಲಕೃಷ್ಣ ಆಚಾರ್ಯರು(89) ಅಲ್ಪಕಾಲದ ಅನಾರೋಗ್ಯದಿಂದ ಸೆ.21ರ ಸೋಮವಾರ ಸ್ವಗೃಹದಲ್ಲಿ ನಿಧನ ಹೊಂದಿದರು.

ವೇದ ಶಾಸ್ತ್ರ ಪಾರಂಗತರಾಗಿದ್ದ ಆಚಾರ್ಯರು ತೆಳ್ಳಾರಿನ ಶ್ರೀರಾಘವೇಂದ್ರ ಮಠದ ಪ್ರಧಾನ ಅರ್ಚಕ, ವ್ಯವಸ್ಥಾಪಕರಾಗಿ ಹಲವು ವರ್ಷಗಳ ಕಾಲ ಕಾರ್ಯ ನಿರ್ವಹಿಸಿದ್ದರು. ಸಂಪ್ರದಾಯ ನಿಷ್ಠೆಯಿಂದ ಧಾರ್ಮಿಕ ವಿಧಿವಿಧಾನಗಳನ್ನು ನಡೆಸುವಲ್ಲಿ ಸಿದ್ಧಹಸ್ತರಾಗಿದ್ದರು. ಉತ್ತಮ ವಾಗ್ಮಿಗಳಾಗಿದ್ದ ಆಚಾರ್ಯರು ಪತ್ನಿ, ಕಾರ್ಕಳದ ನ್ಯಾಯವಾದಿ ಶ್ರೀರಮಣ ಆಚಾರ್ಯ ಸಹಿತ ಮೂವರು ಪುತ್ರರನ್ನು ಅಗಲಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News

ವಸಂತಿ