ಬೆಂಗಳೂರು ಗಲಭೆ ಪ್ರಕರಣ: 32 ಕಡೆಗಳಲ್ಲಿ ಎನ್‍ಐಎ ದಾಳಿ

Update: 2020-09-24 12:22 GMT

ಬೆಂಗಳೂರು, ಸೆ.24: ಡಿಜೆ ಹಳ್ಳಿ, ಕೆಜಿ ಹಳ್ಳಿ ಗಲಭೆ ಪ್ರಕರಣ ಸಂಬಂಧ ನಗರದ 32 ಕಡೆಗಳಲ್ಲಿ ರಾಷ್ಟ್ರೀಯ ತನಿಖಾ ದಳ(ಎನ್‍ಐಎ) ಅಧಿಕಾರಿಗಳು ಏಕಕಾಲಕ್ಕೆ ದಾಳಿ ನಡೆಸಿ ಮಾಹಿತಿ ಸಂಗ್ರಹಿಸಿದ್ದಾರೆ ಎಂದು ವರದಿಯಾಗಿದೆ.

ಗುರುವಾರ ಇಲ್ಲಿನ ನಾಗವಾರ ಸೇರಿದಂತೆ ಹಲವು ಕಡೆಗಳಲ್ಲಿ ಎನ್‍ಐಎ ಅಧಿಕಾರಿಗಳು ಏಕಕಾಲಕ್ಕೆ ದಾಳಿ ನಡೆಸಿ ಗಲಭೆ ಸಂಭವಿಸಿದ ಬಗ್ಗೆ ಮಾಹಿತಿಯನ್ನು ಸಂಗ್ರಹಿಸಿದ್ದಾರೆ.

ಎನ್‍ಐಎ ಐಜಿ, ಡಿಐಜಿ, ಎಸ್‍ಪಿ ನೇತೃತ್ವದ ಅಧಿಕಾರಿಗಳ ತಂಡವು ದಾಳಿ ನಡೆಸಿ ಗಲಭೆಗೆ ಕಾರಣವಾದ ಅಂಶಗಳು ಗಲಭೆಗೆ ನೀಡಿದ ಪ್ರಚೋದನೆ ಹಾಗೂ ಗಲಭೆಕೋರರ ಮಾಹಿತಿಯನ್ನು ಕಲೆಹಾಕಿದೆ ಎಂದು ತಿಳಿದುಬಂದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News