ಯುವಕನ ಕೊಲೆ ಪ್ರಕರಣ: ಐವರು ಆರೋಪಿಗಳ ಬಂಧನ

Update: 2020-09-25 12:22 GMT

ಬೆಂಗಳೂರು, ಸೆ.25: ವೇತನ ವಿಚಾರ ಸಂಬಂಧ ಯುವಕನೋರ್ವನ ಮೇಲೆ ಹಲ್ಲೆ ನಡೆಸಿ ಕೊಲೆಗೈದ ಆರೋಪ ಪ್ರಕರಣ ಸಂಬಂಧ ಐವರು ಆರೋಪಿಗಳನ್ನು ಬಂಧಿಸುವಲ್ಲಿ ನೆಲಮಂಗಲ ಗ್ರಾಮಾಂತರ ಪೊಲೀಸರು ಯಶಸ್ವಿಯಾಗಿದ್ದಾರೆ.

ನೆಲಮಂಗಲದ ವಾಜರಹಳ್ಳಿ ಹರೀಶ(34), ಮಲ್ಲೇಶ(24), ಚಿಕ್ಕಬಿದರಕಲ್ಲಿನ ಹೇಮೇಶ(22), ಕೊರಟಗೆರೆ ತಾಲ್ಲೂಕು ಕ್ಯಾಶವಾರದ ಪ್ರದೀಪ(24), ಚೆನ್ನನಾಯಕನ ಪಾಳ್ಯದ ಸೋಮ(45) ಬಂಧಿತ ಆರೋಪಿಗಳಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಬಂಧಿತ ಆರೋಪಿಗಳು ಕಳೆದ ಸೆ.19 ರಂದು ಸತೀಶನನ್ನು ಕೊಲೆ ಮಾಡಿ ಪರಾರಿಯಾಗಿದ್ದು, ಕಾರ್ಯಾಚರಣೆ ಕೈಗೊಂಡ ಪೊಲೀಸರು, ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News