ಶೂಟಿಂಗ್ ವೇಳೆ ನಟ ಶರಣ್ ಅಸ್ವಸ್ಥ: ಆಸ್ಪತ್ರೆಗೆ ದಾಖಲು

Update: 2020-09-26 13:37 GMT

ಬೆಂಗಳೂರು, ಸೆ.26: ‘ಅವತಾರ ಪುರುಷ’ ಸಿನಿಮಾ ಶೂಟಿಂಗ್ ವೇಳೆ ಅಸ್ವಸ್ಥರಾದ ಚಿತ್ರ ನಟ ಶರಣ್ ಅವರನ್ನು ನಗರದ ಆಸ್ಪತ್ರೆಗೆ ದಾಖಲಿಸಲಾಗಿದೆ.

ನಗರದ ಎಚ್‍ಎಂಟಿ ಗ್ರೌಂಡ್‍ನಲ್ಲಿ ಶನಿವಾರ ಸಿಂಪಲ್ ಸುನಿ ನಿರ್ದೇಶದ ‘ಅವತಾರ ಪುರುಷ’ ಸಿನಿಮಾದ ಚಿತ್ರೀಕರಣದಲ್ಲಿ ನಟ ಶರಣ್ ಪಾಲ್ಗೊಂಡಿದ್ದರು. ಸಾಹಸ ದೃಶ್ಯದ ವೇಳೆ ಅವರಿಗೆ ತೀವ್ರ ಹೊಟ್ಟೆನೋವು ಕಾಣಿಸಿಕೊಂಡಿದೆ. ಕೂಡಲೇ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.

ಶರಣ್ ಅವರ ಸಹೋದರಿ ಹಾಗೂ ನಟಿ ಶ್ರುತಿ ಅವರು ಆಸ್ಪತ್ರೆಗೆ ಭೇಟಿ ನೀಡಿ ಸಹೋದರನ ಆರೋಗ್ಯದ ಬಗ್ಗೆ ವೈದ್ಯರಿಂದ ಮಾಹಿತಿ ಪಡೆದಿದ್ದಾರೆ. ಹೊಟ್ಟೆ ನೋವಿನಿಂದ ಶರಣ್ ಆಸ್ಪತ್ರೆಗೆ ದಾಖಲಾಗಿದ್ದಾರೆ. ವೈದ್ಯರು ಅವರಿಗೆ ಚಿಕಿತ್ಸೆ ನೀಡಿದ್ದಾರೆ. ಅಭಿಮಾನಿಗಳು ಆತಂಕಪಡುವ ಅಗತ್ಯವಿಲ್ಲ ಎಂದು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News