ಡಿ.ಜೆ.ಹಳ್ಳಿ ಗಲಭೆ ಪ್ರಕರಣ ಪೂರ್ವನಿಯೋಜಿತ: ಸಚಿವ ಜೆ.ಸಿ.ಮಾಧುಸ್ವಾಮಿ

Update: 2020-09-26 17:55 GMT

ಬೆಂಗಳೂರು, ಸೆ.26: ಡಿ.ಜೆ.ಹಳ್ಳಿ ಗಲಭೆ ಪ್ರಕರಣ ಪೂರ್ವನಿಯೋಜಿತ. ಈ ಗಲಭೆ ಕುರಿತು ಬಂಧಿಸಿರುವ 421 ಮಂದಿಯನ್ನು ಸಿಸಿಟಿವಿ ದೃಶ್ಯಾವಳಿಗಳನ್ನು ಆಧರಿಸಿ ಬಂಧಿಸಲಾಗಿದೆ. ಅದರಲ್ಲಿ ಐದಾರು ಮಂದಿ ಅಪ್ರಾಪ್ತರಿದ್ದು, ಅವರನ್ನು ಎಲ್ಲಿ ಇಡಬೇಕು ಅಲ್ಲಿ ಇಡಲಾಗಿದೆ ಎಂದು ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಜೆ.ಸಿ.ಮಾಧುಸ್ವಾಮಿ ವಿಧಾನಸಭೆಯಲ್ಲಿ ತಿಳಿಸಿದ್ದಾರೆ.

ಪೊಲೀಸರು ಹೊರತುಪಡಿಸಿ ಬೇರೆ ಯಾವ ಗಾಯಾಳು ಕೂಡ ನಮಗೆ ಕಂಡಿಲ್ಲ. ಪೊಲೀಸರನ್ನು ಹೊಡೆದಿದ್ದಾರೆ. ಪೊಲೀಸರು ಘಟನಾ ಸ್ಥಳಕ್ಕೆ ಬರಲು ಸಾಧ್ಯವಿಲ್ಲದಂತೆ ಎಲ್ಲ ರಸ್ತೆಗಳನ್ನು ಮುಚ್ಚಿದ್ದಾರೆ. ಶ್ರೀನಿವಾಸಮೂರ್ತಿ ಮನೆಯನ್ನೆ ಯಾಕೆ ಸುಟ್ಟು ಹಾಕಿದರು. ಪೊಲೀಸರಿಗೆ ಮನೆ, ಕುಟುಂಬ ಇಲ್ಲವೇ ಎಂದು ಅವರು ಪ್ರಶ್ನಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News