ಪದ್ಮಪ್ರಸಾದ್
Update: 2020-10-08 17:43 GMT
ಮೂಡುಬಿದಿರೆ : ಚೌಟರ ಅರಮನೆಯ ಹಿರಿಯರಾದ ಪದ್ಮಪ್ರಸಾದ್(72) ಮಂಗಳೂರಿನ ಸ್ವಗೃಹದಲ್ಲಿ ಬುಧವಾರ ನಿಧನರಾದರು. ಮೂಡುಬಿದಿರೆಯ ಬಸದಿಗಳ ಮೊಕ್ತೇಸರರಾಗಿದ್ದ ಅವರು ಮಂಗಳೂರಿನಲ್ಲಿ ಉದ್ಯಮಿಯಾಗಿದ್ದರು.
ಅವರಿಗೆ ಪತ್ನಿ, ಪುತ್ರ, ಪುತ್ರಿ ಇದ್ದಾರೆ. ಅವರ ನಿಧನಕ್ಕೆ ಜೈನಮಠದ ಸ್ವಸ್ತಿಶ್ರೀ ಭಟ್ಟಾರಕ ಚಾರುಕೀರ್ತಿ ಪಂಡಿತಾಚಾರ್ಯವರ್ಯ ಸ್ವಾಮೀಜಿ ಶೋಕ ವ್ಯಕ್ತಪಡಿಸಿದ್ದಾರೆ.