ಎನ್.ರಂಗನಾಥ ಆಚಾರ್ಯ
Update: 2020-10-14 15:55 GMT
ಉಡುಪಿ, ಅ.14: ಇಲ್ಲಿನ ಬೈಲಕೆರೆ ನಿವಾಸಿ, ಉಡುಪಿ ಅಕಾಡೆಮಿ ಸ್ಕೂಲ್ ಎಂಡ್ ಫೈನ್ಆರ್ಟ್ಸ್ನಲ್ಲಿ ಸುಮಾರು 45 ವರ್ಷಗಳ ಕಾಲ ಕರ್ಣಾಟಕ ಸಂಗೀತದ ಅಧ್ಯಾಪಕರಾಗಿ ಸೇವೆ ಸಲ್ಲಿಸಿದ್ದ ಬೈಲಕೆರೆ ಎನ್.ರಂಗನಾಥ ಆಚಾರ್ಯ (97) ಅವರು ಅನಾರೋಗ್ಯದಿಂದ ಸ್ವಗೃಹದಲ್ಲಿ ನಿಧನರಾದರು.
ನಗರದಲ್ಲಿ ಅನೇಕ ಸಂಗೀತ ಕಾರ್ಯಕ್ರಮಗಳನ್ನು ನಡೆಸಿಕೊಂಡಿದ್ದ ಮೃತರು, ನಾಲ್ವರು ಪುತ್ರರು ಹಾಗೂ ಇಬ್ಬರು ಪುತ್ರಿಯರನ್ನು ಅಗಲಿದ್ದಾರೆ.