ವರ್ಗಾವಣೆಗೊಳ್ಳುವ ಅಧಿಕಾರಿಗಳು ಸರಕಾರಿ ವಾಹನ ಕೊಂಡೊಯ್ಯುವಂತಿಲ್ಲ: ಪ್ರವೀಣ್ ಸೂದ್

Update: 2020-10-28 16:48 GMT

ಬೆಂಗಳೂರು, ಅ.28: ವರ್ಗಾವಣೆಗೊಳ್ಳುವ ಅಧಿಕಾರಿಗಳು ಆಯಾ ಸ್ಥಳಕ್ಕೆ ಸರಕಾರಿ ವಾಹನ ಕೊಂಡೊಯ್ಯುವಂತಿಲ್ಲ ಎಂದು ಪೊಲೀಸ್ ಇಲಾಖೆಗೆ ಡಿಜಿ ಐಜಿಪಿ ಪ್ರವೀಣ್ ಸೂದ್ ಆದೇಶ ಹೊರಡಿಸಿರುವುದಾಗಿ ತಿಳಿದುಬಂದಿದೆ.

ಕೆಲವು ಅಧಿಕಾರಿಗಳು ತಾವು ವರ್ಗಾವಣೆಯಾಗಿ ಹೋಗುವ ಸ್ಥಳಕ್ಕೆ ಸರಕಾರಿ ವಾಹನ ಕೊಂಡೊಯ್ಯುತ್ತಿದ್ದರು ಎಂಬ ಆರೋಪ ಕೇಳಿಬರುತ್ತಿತ್ತು, ಈ ಹಿನ್ನೆಲೆ ವರ್ಗಾವಣೆಗೊಳ್ಳುವ ಅಧಿಕಾರಿಗಳು ವರ್ಗಾವಣೆಯಾಗುವ ಸ್ಥಳಕ್ಕೆ ಸರಕಾರಿ ವಾಹನ ಕೊಂಡೊಯ್ಯುವಂತಿಲ್ಲ ಎಂದು ಅವರು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News