ಪುಲ್ವಾಮ ಕುರಿತ ಸತ್ಯ ಪಾಕ್ ಸಂಸತ್ತಿನಲ್ಲಿ ಬಹಿರಂಗವಾಗಿದೆ: ವಿಪಕ್ಷಗಳಿಗೆ ಪ್ರಧಾನಿ ತರಾಟೆ

Update: 2020-10-31 09:17 GMT

 ಅಹ್ಮದಾಬಾದ್: ಕೆವಾಡಿಯಾ-ಸಬರಮತಿ ಸೀ ಪ್ಲೇನ್ ಸೇವೆಯ ಉದ್ಘಾಟನಾ ಸಮಾರಂಭದಲ್ಲಿ ಶನಿವಾರ ಮಾತನಾಡಿದ ಪ್ರಧಾನಮಂತ್ರಿ ನರೇಂದ್ರ ಮೋದಿ ಪಾಕಿಸ್ತಾನದ ವಿರುದ್ಧ ವಾಗ್ದಾಳಿ ನಡೆಸಿದರು. ಪುಲ್ವಾಮ ದಾಳಿ ಸತ್ಯವನ್ನು ಪಾಕಿಸ್ತಾನ ಸಂಸತ್ತಿನಲ್ಲಿ ಬಹಿರಂಗಪಡಿಸಿದೆ . ಭಾರತದಲ್ಲಿ ಅನೇಕರಿಗೆ ಇದು ರಾಜಕೀಯ ವಿಷಯವಾಗಿತ್ತು ಎಂದು ಹೇಳಿದರು.

  ಪಾಕಿಸ್ತಾನ ಫೆಡರಲ್ ಸಚಿವ ಫವಾದ್ ಚೌಧರಿ ರಾಷ್ಟ್ರೀಯ ಅಸೆಂಬ್ಲಿಯಲ್ಲಿ ಇತ್ತೀಚೆಗೆ ನೀಡಿದ ಹೇಳಿಕೆಯನ್ನು ಉಲ್ಲೇಖಿಸಿದ ಪ್ರಧಾನಿ ನೆರೆಯ ದೇಶದ ಸಂಸತ್ತಿನಲ್ಲಿ ಸತ್ಯವನ್ನು (ಭಾರತದಲ್ಲಿ ಪುಲ್ವಾಮಾ ದಾಳಿಯ ಕುರಿತು)ಒಪ್ಪಿಕೊಂಡಿರುವ ರೀತಿಯು ಈ ಘಟನೆಯ ಕುರಿತು ರಾಜಕೀಯ ಮಾಡಿದವರ ನೈಜ ಮುಖಗಳನ್ನು ಅದು ಬಹಿರಂಗಪಡಿಸಿದೆ ಎಂದು ಪ್ರಧಾನಿ ಅವರು ವಿಪಕ್ಷ ಅದರಲ್ಲೂ ಕಾಂಗ್ರೆಸ್‌ನ ಕಾಲೆಳೆದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News