ಕತ್ತು ಹಿಸುಕಿ ಗೃಹಿಣಿಯ ಕೊಲೆ

Update: 2020-10-31 16:19 GMT

ಬೆಂಗಳೂರು, ಅ.31: ಕತ್ತು ಹಿಸುಕಿ ಮಹಿಳೆಯೊಬ್ಬಾಕೆಯನ್ನು ಕೊಲೆಗೈದಿರುವ ಘಟನೆ ಕೆ.ಆರ್. ಪುರ ಠಾಣಾ ವ್ಯಾಪ್ತಿಯ ನಡೆದಿದೆ.

ನಗರದ ಆರ್‍ಟಿಒ ಕಚೇರಿಯ ಹಿಂಭಾಗದ ಮನೆಯಲ್ಲಿ ಈ ಘಟನೆ ನಡೆದಿದ್ದು, ಕೊಲೆಯಾದ ಮಹಿಳೆಯನ್ನು ಶೈಲಶ್ರೀ ಎಂದು ಗುರುತಿಸಲಾಗಿದೆ.

ಘಟನೆ ಸಂಬಂಧ ಕೋಲಾರ ಮೂಲದ ಶ್ರೀಕಂಠ ಎಂಬಾತನನ್ನು ವಶಕ್ಕೆ ಪಡೆದು, ವಿಚಾರಣೆಗೊಳಪಡಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News