ಗುರುದಾಸ್ ಭಂಡಾರಿ
Update: 2020-11-14 13:49 GMT
ಉಡುಪಿ, ನ.14: ಭಂಡಾರಿ ಸಮಾಜದ ಹಿರಿಯರಾದ ಗುರುದಾಸ್ ಎಂ. ಭಂಡಾರಿ (91) ಉಡುಪಿ ಕಾಡಬೆಟ್ಟುನ ತಮ್ಮ ಸ್ವಗೃಹದಲ್ಲಿ ನಿಧನ ಹೊಂದಿದರು.
ಇವರು ಮುಂಬೈ ಭಂಡಾರಿ ಸೇವಾ ಸಮಿತಿಯ ಸ್ಥಾಪಕ ಸದಸ್ಯರಾಗಿದ್ದು, ಮುಂಬಯಿಯಲ್ಲಿ ಬ್ಯಾಂಕ್ ಉದ್ಯೋಗಿಯಾಗಿ ಹೋಟೆಲ್ ಮತ್ತು ಪ್ರಿಂಟಿಂಗ್ ಪ್ರೆಸ್ ಉದ್ಯಮದಲ್ಲಿ ತೊಡಗಿಸಿಕೊಂಡಿದ್ದರು. ಇವರು ಪುತ್ರ ಮತ್ತು ಪುತ್ರಿಯನ್ನು ಅಗಲಿದ್ದಾರೆ.