ಹರೀಶ್ ಶೆಟ್ಟಿ

Update: 2020-11-27 17:11 GMT

ಉಪ್ಪಿನಂಗಡಿ: ಇಲ್ಲಿನ ಪುಳಿತ್ತಡಿಯ ಆರ್ತಿಲ ನಿವಾಸಿ ಐತಪ್ಪ ಶೆಟ್ಟಿ ಎಂಬವರ ಪುತ್ರ ಹರೀಶ್ ಶೆಟ್ಟಿ (40) ಶುಕ್ರವಾರ ನಸುಕಿನ ಜಾವ ಹೃದಯಾಘಾತದಿಂದ ನಿಧನರಾದರು.

ಮಾಣಿಯ ವೈನ್‍ಶಾಪ್‍ವೊಂದರಲ್ಲಿ ಮ್ಯಾನೇಜರ್ ಆಗಿ ದುಡಿಯುತ್ತಿದ್ದ ಇವರು ರಾತ್ರಿ ಆರ್ತಿಲದ ಮನೆಗೆ ಬಂದು ಮಲಗಿದ್ದು, ಇವರಿಗೆ ನಸುಕಿನ ಜಾವ ಎದೆನೋವು ಕಾಣಿಸಿಕೊಂಡಿದೆ. ಅವರನ್ನು ಕೂಡಲೇ ಮಂಗಳೂರಿನ ಖಾಸಗಿ ಆಸ್ಪತ್ರೆಗೆ ಸಾಗಿಸುವಷ್ಟರಲ್ಲಿ ಅವರು ಮೃತಪಟ್ಟಿದ್ದಾರೆ. ಮೃತರು ಪತ್ನಿ, ಪುತ್ರಿ, ನಾಲ್ವರು ಸಹೋದರಿಯರನ್ನು ಅಗಲಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News

ವಸಂತಿ