ರೈತರ ಪ್ರತಿಭಟನೆ ಬೆಂಬಲಿಸುವಂತೆ ರಾಜ್ಯಸಭಾ ಸದಸ್ಯ ಚಂದ್ರಶೇಖರ್ ಮನವಿ

Update: 2020-11-29 16:59 GMT

ಬೆಂಗಳೂರು, ನ. 29: ರಾಷ್ಟ್ರ ರಾಜಧಾನಿ ಹೊಸದಿಲ್ಲಿಯಲ್ಲಿ ರೈತರಿಂದ ಅತೀದೊಡ್ಡ ಪ್ರತಿಭಟನೆ ನಡೆಯುತ್ತಿದೆ. ಅದನ್ನು ರಾಜ್ಯದ ಜನತೆ ಬೆಂಬಲಿಸಬೇಕು ಎಂದು ರಾಜ್ಯಸಭೆ ಸದಸ್ಯ ಜಿ.ಸಿ ಚಂದ್ರಶೇಖರ್ ಮನವಿ ಮಾಡಿದ್ದಾರೆ.

ಈ ಕುರಿತು ಟ್ವೀಟ್ ಮಾಡಿರುವ ಅವರು, ದಿಲ್ಲಿಯಲ್ಲಿ 96 ಸಾವಿರ ಟ್ರ್ಯಾಕ್ಟರ್ ಗಳು, 1.20 ಕೋಟಿಗೂ ಅಧಿಕ ರೈತರು ಪ್ರತಿಭಟನೆ ನಡೆಸುತ್ತಿದ್ದಾರೆ. ಅವರು ಭಾರತದ ರಾಜಧಾನಿಯ ಹೊರವಲಯದಲ್ಲಿ ನಿಂತಿದ್ದಾರೆ. ಇದು ಇತಿಹಾಸದಲ್ಲಿಯೇ ಅತೀ ದೀರ್ಘ ರೈತ ಪ್ರತಿಭಟನಾ ಮೆರವಣಿಗೆಯಾಗಿದೆ. ನಮ್ಮ ಹೋರಾಟವನ್ನು ಬಲಪಡಿಸಿ, ಇತಿಹಾಸದ ಸುಂದರ ಅಧ್ಯಾಯವಾಗಿರುವ ನಮ್ಮ ಹೋರಾಟವನ್ನು ದಯವಿಟ್ಟು ಜನರಿಗೆ ತಿಳಿಸಿ. ಕನಿಷ್ಠ ನಿಮ್ಮ ಮಿತ್ರರಿಗಾದರೂ ನಮ್ಮ ಮನವಿಯನ್ನು ತಲುಪಿಸಿ ಎಂದು ಮನವಿ ಮಾಡಿಕೊಂಡಿದ್ದಾರೆ.

ರೈತನೊಬ್ಬ ನಿಮಗೆ ಮತ್ತು ನಿಮ್ಮ ಕುಟುಂಬಕ್ಕೆ ಅನ್ನ ಬೆಳೆಯುವ ಅನ್ನದಾತರು ಎನ್ನನುವುದನ್ನು ಮರೆಯಬೇಡಿ. ದೆಹಲಿಯಲ್ಲಿ ರೈತರು ನಡೆಸುತ್ತಿರುವ ಪ್ರತಿಭಟನೆಯನ್ನು ಕಾಂಗ್ರೆಸ್ ನಾಯಕರು ಸ್ವಾಗತಿಸಿದ್ದು, ಸರಕಾರ ರೈತರ ನ್ಯಾಯಯುತ ಪ್ರತಿಭಟನೆ ನಡೆಸಲು ಅವಕಾಶ ಮಾಡಿಕೊಡಬೇಕು ಹಾಗೂ ಸಮಸ್ಯೆ ನಿವಾರಿಸಬೇಕು ಎಂದು ಒತ್ತಾಯಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News